ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ : ವೈದ್ಯಕೀಯ ವರದಿ ಹೇಳೋದೇನು..?
ಸಿಐಡಿ ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೀಗ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು ಲಕ್ಷ್ಮಿಯವರದ್ದು ಸಾವು ಅಲ್ಲ ಪಾರ್ಷಿಯಲ್ ಆತ್ಮಹತ್ಯೆ ಎಂದು ದೃಢಪಡಿಸಿದ್ದಾರೆ.
ವೈದ್ಯಕೀಯ ವರದಿ ಪ್ರಕಾರ ಪಾರ್ಷಿಯಲ್ ಆತ್ಮಹತ್ಯೆ ಎಂದರೆ ಸಹಜವಾಗಿ ನೇಣು ಬಿಗಿದುಕೊಂಡಾಗ ಕಾಲು ಇಡೀ ದೇಹ ನೇತಾಡುತ್ತದೆ. ಆದರೆ ಪಾರ್ಷಿಯಲ್ ಆತ್ಮಹತ್ಯೆಯಲ್ಲಿ ಕಾಲು ದೇಹ ನೇತಾಡುವುದಿಲ್ಲ. ಬದಲಾಗಿ ಕಿಟಕಿಗೆ ಹ್ಯಾಂಗ್ ಮಾಡಿಕೊಂಡು ಮೊಣಕಾಲು ಕೆಳಗಿಟ್ಟರೆ ಸಾವು ಖಚಿತ. ಇದೇ ರೀತಿಯ ಆತ್ಮಹತ್ಯೆ ಲಕ್ಷ್ಮಿ ಮಾಡಿಕೊಂಡಿದ್ದಾಳೆ.
ಆರಂಭದಲ್ಲಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಮಾಡಲಾಗಿದೆ ಎಂದು ತಂದೆ ವೆಂಕಟೇಶ್ ಆರೋಪಿಸಿದ್ದರು. ಗುತ್ತಿಗೆದಾರ ಮನೋಹರ್ ವಿರುದ್ಧ ದೂರು ಕೂಡ ಕೊಟ್ಟಿದ್ದರು. ದೂರಿನ ಆಧಾರದ ಮೇಲೆ ತನಿಖೆ ಮಾಡಿದ ಪೊಲೀಸರು ವೈದ್ಯಕೀಯ ವರದಿ ಬಳಿಕ ಲಕ್ಷ್ಮಿಯದ್ದು ಪಾರ್ಷಿಯಲ್ ಆತ್ಮಹತ್ಯೆ ಎಂದಿದ್ದಾರೆ.
ಲಕ್ಷ್ಮಿ ಅವರ ಮೇಲೆ ಅತ್ಯಾಚಾರವಾಗಿರಬಹುದೇ ಎನ್ನುವ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದಾರೆ.