ಹಿಟ್ಟಿನ ಗಿರಣಿಯಲ್ಲಿ ಸಿಕ್ಕಿಕೊಂಡ ಬಾಲಕನ ದೇಹ ಛಿದ್ರ ಛಿದ್ರ: ಗಿರಣಿ ಮಾಲೀಕರ ವಿರುದ್ಧ ಕೇಸ್!
ಹಿಟ್ಟಿನ ಗಿರಣಿಯಲ್ಲಿ 16 ವರ್ಷದ ಬಾಲಕ ಸಿಕ್ಕಿಕೊಂಡು ದೇಹ ಛಿದ್ರಛಿದ್ರವಾದ ಘಟನೆ ಜೈಪುರದ ನಹರ್ಗಢದಲ್ಲಿ ಸಂಭವಿಸಿದೆ.
ಮೃತ ಬಾಲಕನನ್ನು ಅಮಿತ್ ದಾಸ್ ಎಂದು ಗುರುತಿಸಲಾಗಿದೆ. ಹಿಟ್ಟು ಗಿರಣಿಯಲ್ಲಿ ಬಾಲಕ ಸಿಕ್ಕಿಕೊಂಡು ಆತನ ದೇಹ ಛಿದ್ರಗೊಂಡ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಸಂಜೆ 5.30 ರ ಸುಮಾರಿಗೆ ಅಮಿತ್ ದಾಸ್ ಚೀಲಗಳಿಂದ ಗೋಧಿ ಹಾಕುವಾಗ ಗ್ರೈಂಡರ್ಗೆ ಸಿಕ್ಕಿಕೊಂಡಿದ್ದಾನೆ. ಮೊದಲ ಆತನ ಕೈಗಳು ಸಿಕ್ಕಿಕೊಂಡಿವೆ. ನಂತರ ಗ್ರೈಂಡರ್ ಸಂಪೂರ್ಣವಾಗಿ ಆತನ ದೇಹವನ್ನು ಎಳೆದುಕೊಂಡಿದೆ. ಸೊಂಟದವರೆಗೆ ಅವನ ದೇಹವು ಗ್ರೈಂಡರ್ ಒಳಗೆ ಸಿಲುಕಿಕೊಂಡು ಬಾಲಕ ಮೃತ ಪಟ್ಟಿದ್ದಾನೆ. ಅವನ ಕುತ್ತಿಗೆ ಮುರಿದು ಬೆರಳುಗಳು ತುಂಡು ತುಂಡಾಗಿ ಹೋಗಿವೆ.
ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಂಡಿದ್ದಕ್ಕಾಗಿ ಗಿರಣಿ ಮಾಲೀಕರ ವಿರುದ್ಧ ಕೊಲೆ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯ ಇತರ ಸೆಕ್ಷನ್ಗಳ ಅಡಿಯಲ್ಲಿ ಅಪರಾಧಿ ನರಹತ್ಯೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಸದ್ಯ ಮಾಲೀಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಮತ್ತು ನಾಗರಿಕ ರಕ್ಷಣಾ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ.