7 ಸಚಿವರ ಹೆಸರು ಫೈನಲ್ : ಮುನಿರತ್ನಗೆ ಕೈತಪ್ಪಿದ ಸಚಿವ ಸ್ಥಾನ..!
ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಇಂದು ತೆರೆ ಬಿದ್ದಿದ್ದು. ಹೊಸದಾಗಿ 7 ಜನ ಸಚಿವರ ಹೆಸರನ್ನು ಸಿಎಂ ಯಡಿಯೂರಪ್ಪನವರೇ ಅಧಿಕೃತವಾಗಿ ಘೋಷಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಹೊಸದಾಗಿ 7 ಜನ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಉಮೇಶ್ ಕತ್ತಿ. ಅರವಿಂದ ಲಿಂಬಾವಳಿ, ಮುರಗೇಶ್ ನಿರಾಣಿ, ಸಿಪಿ ಯೋಗೇಶ್ವರ್, ಎಸ್ ಅಂಗಾರ, ಎಂಟಿಬಿ ನಾಗರಾಜ್, ಆರ್ ಶಂಕರ್ ಅವರಿಗೆ ಸಂಕ್ರಾಂತಿಗೆ ಸಿಹಿ ಸುದ್ದಿ ಹೈಕಮಾಂಡ್ ಸೂಚಿಸಿದೆ. ಇದರಲ್ಲಿ ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಿದ್ದು, ಹೈಕಮಾಂಡ ಒಂದು ಸ್ಥಾನವನ್ನು ಉಳಿಸಿಕೊಂಡಿದ್ದು ಅದನ್ನು ಒಂದುವರೆ ತಿಂಗಳ ಬಳಿಕೆ ಮುನಿರತ್ನ ಅವರಿಗೆ ನೀಡಬೇಕೆಂದು ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ರಾಜ್ಯಭವನಕ್ಕೆ 7 ನೂತನ ಸಚಿವರ ಪಟ್ಟಿಯನ್ನು ರವಾನಿಸಲಾಗಿದ್ದು, ಇವತ್ತು ಮಧ್ಯಾಹ್ನ 3.30ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಒಂದು ಸ್ಥಾನ ಉಳಿಸಿಕೊಂಡಿದ್ದೇನೆ ಎಂದು ಸಿಎಂ ಹೇಳಿದ್ದು ಇದಕ್ಕೆ ನಾಳೆ ಅಬಕಾರಿ ಸಚಿವ ನಾಗೇಶ್ ರಾಜಿನಾಮೆ ತೆಗೆದುಕೊಳ್ಳುವ ಸಾಧ್ಯತೆ ಇದೆ.