ಪ್ರತಿದಿನ ರಸಂ ಕುಡಿದರೆ ಕೊರೊನಾ ಬರುವುದಿಲ್ಲ; ಸೋಂಕು ಸಾಯುತ್ತದೆ: ತಮಿಳು ಸಚಿವರ ವಿಡಿಯೋ ವೈರಲ್‌

ಕೊರೊನಾ ಸೋಂಕಿನ ಆತಂಕದಲ್ಲಿರುವ ದೇಶದ ಜನರಿಗೆ ಲಾಕ್‌ಡೌನ್‌ ಆರಂಭವಾದ ದಿನಗಳಿಂದಲೂ ಪ್ರಧಾನಿ ಮಂತ್ರಿ ಸೇರಿದಂತೆ ದೇಶದ ಹಲವು ಶಾಸಕ-ಸಚಿವರು ತಮಾಷೆಯ ಹೇಳಿಕೆಗಳನ್ನು ಕೊಟ್ಟು, ರಂಚಿಸುತ್ತಿದ್ದಾರೆ.

ತಟ್ಟೆ ಬಾರಿಸಿ, ದೀಪ ಬೆಳಗಿಸಿ, ಗಂಜಲ ಕುಡಿದು, ಗೋ ಕೊರೊನಾ ಎಂದು ಹೇಳಿದೆಲ್ಲಾ ಮುಗಿದಿದ್ದು, ಇದೀಗ ರಸಂ ಕುಡಿಯುವ ಟಾಸ್ಕ್ ಅನ್ನು ತಮಿಳುನಾಡಿ ಸಚಿವರೊಬ್ಬರು ನೀಡಿದ್ದಾರೆ.

ತಮಿಳುನಾಡಿನ ಜನರ ಆಹಾರ ಪದ್ಧತಿಯಲ್ಲೇ ಎಲ್ಲದಕ್ಕೂ ಪರಿಹಾರವಿದೆ. ನಾವು ಪ್ರತಿದಿನ ಉಪಯೋಗಿಸುವ ರಸಂ ಮತ್ತು ಸಾಂಬಾರ್ ಕೊರೋನಾ ರೋಗಕ್ಕೆ ರಾಮಬಾಣ. ಪ್ರತಿದಿನವೂ ರಸಂ ಕುಡಿಯುವುದರಿಂದ ಕೊರೊನಾ ಸಾಯುತ್ತದೆ. ಕೊರೊನಾ ಹರಡುವುದಿಲ್ಲ ಎಂದು ಮಿಳುನಾಡಿನ ಸಚಿವ ರಾಜೇಂದ್ರ ಬಾಲಾಜಿ ಹೇಳಿದ್ದು, ಅವರ ವಿಡಿಯೋ ವೈರಲ್‌ ಅಗಿದೆ.

ನಾನು ಪ್ರತಿದಿನ ಹೊರಗೆ ಹೋಗುವಾಗ ಒಂದು ಲೋಟ ರಸಂ ಕುಡಿದುಕೊಂಡು ಹೋಗುತ್ತೇನೆ. ನೀವು ರಸಂ ಮತ್ತು ಸಾಂಬಾರನ್ನು ಪ್ರತಿದಿನ ಕುಡಿದರೆ ಕೊರೊನಾ ಸೋಂಕು ಹತ್ತಿರ ಸುಳಿಯುವುದಿಲ್ಲ. ರಸಂ ಕುಡಿಯುವುದರಿಂದ ಕೊರೊನಾ ನಮ್ಮ ದೇಹದಲ್ಲಿ ಇದ್ದರೂ ಓಡಿಹೋಗುತ್ತದೆ ಅಥವಾ ಸತ್ತು ಹೋಗುತ್ತದೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

https://twitter.com/NairShilpa1308/status/1348974358006431746?s=20

ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ನಮ್ಮ ಆರೋಗ್ಯಕರವಾದ ಆಹಾರ ಪದ್ಧತಿಯೂ ಕಾರಣ. ನಾವು ಅರಿಶಿಣ ಹಾಕಿದ ನೀರಿನಿಂದ ಸ್ನಾನ ಮಾಡುವುದರಿಂದ, ನಮ್ಮ ಆಹಾರದಲ್ಲಿ ಶುಂಠಿ, ಕಾಳುಮೆಣಸು, ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ ಕೊರೊನಾ ವೈರಸ್​ ಸಾವನ್ನಪ್ಪುತ್ತದೆ ಎಂದು ರಾಜೇಂದ್ರ ಬಾಲಾಜಿ ಹೇಳಿದ್ದಾರೆ.


ಇದನ್ನೂ ಓದಿ: ಕೆಜಿಎಫ್‌-2 ಟೀಸರ್‌ನಲ್ಲಿ ಪ್ರಚೋದನಾ ದೃಶ್ಯ: ಯಶ್‌ಗೆ ಆರೋಗ್ಯ ಇಲಾಖೆ ನೋಟಿಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights