ಹ್ಯಾಂಡ್ಬ್ರೇಕ್ ಹಾಕದೇ ನಿಲ್ಲಿಸಿದ್ದ ಕಾರು ಕಾಲುವೆಗೆ ಉರುಳಿ ನಾಲ್ವರು ದುರ್ಮರಣ…!
ಹ್ಯಾಂಡ್ಬ್ರೇಕ್ ಹಾಕದೇ ನಿಲ್ಲಿಸಿದ್ದ ಕಾರು ಕಾಲುವೆಗೆ ಉರುಳಿ ನಾಲ್ಕು ಜನ ಸಾವನ್ನಪ್ಪಿದ ಘಟನೆ ಜೈಪುರದ ಹನುಮನ್ಗಢ ಜಿಲ್ಲೆಯಲ್ಲಿ ನಡೆದಿದೆ.
ಮೃತರಾದ ದಂಪತಿ, ಅವರ ಮಗಳು ಮತ್ತು ಸಂಬಂಧಿ ಬುಧುವಾರ ಸಿಕಾರ್ನಿಂದ ರಾವತ್ಸರ್ಗೆ ತೆರಳುತ್ತಿದ್ದರು. ಮೃತ ವ್ಯಕ್ತಿ ವಿನೋದ್ ಕುಮಾರ್ ತನ್ನ ಕುಟುಂಬ ಸ್ನೇಹಿತ ರಮೇಶ್ ಕುಮಾರ್ ಅವರ ಕಾರನ್ನು ಚಾಲನೆ ಮಾಡುತ್ತಿದ್ದರು. ಕಾರು ನಿಲ್ಲಿಸುವ ವೇಳೆ ಇಳಿಜಾರಿನ ತುದಿಯಲ್ಲಿ ನಿಲ್ಲಿಸಿದ್ದಾರೆ.
ಈ ವೇಳೆ ಹ್ಯಾಂಡ್ಬ್ರೇಕ್ ಹಾಕದ ಕಾರಣ, ಕಾರು ಉರುಳಿ ಇಂದಿರಾಗಾಂಧಿ ಕಾಲುವೆಗೆ ಬಿದ್ದಿದೆ ಎಂದು ಹನುಮನ್ಗಢ ಪಟ್ಟಣ ಪೊಲೀಸ್ ಠಾಣೆ ಇನ್ಚಾರ್ಜ್ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
ಘಟನೆಯಲ್ಲಿ ವಿನೋದ್ ಕುಮಾರ್ (45), ಅವರ ಪತ್ನಿ ರೇಣು (42), ಅವರ 15 ವರ್ಷದ ಮಗಳು ಮತ್ತು ಸಂಬಂಧಿ ಸುನೀತಾ ಭತಿ (40) ಮೃತಪಟ್ಟಿದ್ದಾರೆ.
ಶವಗಳನ್ನು ಕಾಲುವೆಯಿಂದ ಹೊರತೆಗೆಯಲಾಗುತ್ತಿದೆ. ಮರಣೋತ್ತರ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.