ರಮೇಶ್ ಜಾರಕಿಹೊಳಿ ಪರವಾಗಿ ದೂರು ಕೊಟ್ಟ ಮಾಜಿ ಶಾಸಕ ನಾಗರಾಜ್..!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ತನಿಖೆ ವಿಚಾರಣೆಗೆ ಯಾರ ದೂರು ಕೂಡ ದಾಖಲಾಗದ ಹಿನ್ನೆಲೆಯಲ್ಲಿ ಕೊನೆಗೂ ರಮೇಶ್ ಜಾರಕಿಹೊಳಿ ಆಪ್ತ, ಮಾಜಿ ಶಾಸಕ ಎಮ್.ವಿ ನಾಗರಾಜ್ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿನ್ನೆಯಿಂದ ಎಸ್ಐಟಿ ಸಿಡಿ ತನಿಖೆ ಶುರು ಮಾಡಿತ್ತಾದರೂ ಈ ಪ್ರಕರಣದಲ್ಲಿ ದೂರು ದಾಖಲಾಗದ ಹಿನ್ನೆಲೆಯಲ್ಲಿ ಯಾರನ್ನೂ ಬಂಧಿಸುವಂತಿರಲಿಲ್ಲ. ಹೀಗಾಗಿ ಕೊಂಚ ತನಿಖೆಗೆ ಅಡೆತಡೆ ಉಂಟಾಗಿತ್ತು. ಇದರ ಬೆನ್ನಲ್ಲೆ ಕೊನೆಗೂ ರಮೇಶ್ ಜಾರಕಿಹೊಳಿ ದೂರು ಕೊಟ್ಟಿದ್ದಾರೆ. ನೇರವಾಗಿ ರಮೇಶ್ ದೂರು ದಾಖಲಿಸದೇ ಮಾಜಿ ಶಾಸಕ ನಾಗರಾಜ್ ಮೂಲಕ ದೂರು ದಾಖಲಿಸಿದ್ದಾರೆ.
ನಾಗರಾಜ್ ಅವರಿಂದ ದೂರು ಸ್ವೀಕರಿಸಿದ ಸದಾಶಿವನಗರದ ಪೊಲೀಸರು ಡಿಸಿಪಿ ಅನುಚೇತ್ ಗೆ ದೂರಿನ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಅನುಚೇತ್ ಎಸ್ಐಟಿ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ದೂರು ದಾಖಲಾಗದೇ ಇದ್ದರಿಂದ ಸಮಗ್ರ ತನಿಖೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸದ್ಯ ದೂರು ನೀಡಿದ್ದರಿಂದ ತನಿಖೆ ಸುಲಭವಾಗಿದೆ.
ಆಶ್ಚರ್ಯವೆಂದರೆ ವಕೀಲರ ಮಾಹಿತಿ ಮೇರೆಗೆ ಯಾರ ವಿರುದ್ಧವೂ ದೂರು ನೀಡಿಲ್ಲ. ಬ್ಲ್ಯಾಕ್ ಮೇಲ್ ಮತ್ತು ತೆಜೋವಧೆಗೆ ಯತ್ನ ಎಂದು ದೂರನ್ನು ದಾಖಲಿಸಲಾಗಿದೆ. ನಕಲಿ ಸಿಡಿ ಎಂದು ನಮೋದು ಮಾಡಿದ್ದಾರೆ. ರಮೆಶ್ ಲಿಖಿತ ರೂಪದಲ್ಲಿ ದೂರನ್ನು ಕೊಟ್ಟಿದ್ದ ಪ್ರತಿಯನ್ನು ನಾಗರಾಜ್ ಠಾಣೆಗೆ ತಲುಪಿಸಿದ್ದಾರೆ.