‘ನಮ್ಮ ಕುಟುಂಬಕ್ಕೆ ಅನಗತ್ಯ ಕಾಟ’ ಡಿವೈಎಸ್ಪಿ ಕಟ್ಟೀಮನಿ ವಿರುದ್ಧ ಸಿಡಿಲೇಡಿ ಗಂಭೀರ ಆರೋಪ…?
ನಮ್ಮ ಪೋಷಕರಿಗೆ ಡಿವೈಎಸ್ಪಿ ಕಟ್ಟೀಮನಿ ಅನಗತ್ಯ ಕಾಟ ಕೊಡುತ್ತಿದ್ದಾರೆ ಎಂದು ಸಿಡಿಲೇಡಿ ಗಂಭೀರ ಆರೋಪ ಮಾಡಿದ್ದಾಳೆ.
ಹೌದು… ಈಗಾಗಲೇ ನಾಲ್ಕು ಬಾರಿ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ ಇನ್ನೂ ಪತ್ತೆಯಾಗಿಲ್ಲ. ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡುತ್ತಲೇ ಇದ್ದಾಳೆ. ಜೊತೆಗೆ ಸಿಡಿ ಯುವತಿ ಮುಖ್ಯ ನ್ಯಾಯಧೀಶರಿಗೆ ಪತ್ರ ಬರೆದಿದ್ದಾಳೆ ಎನ್ನಲಾಗುತ್ತಿದೆ. ಈ ಪತ್ರದಲ್ಲಿ ನೇರವಾಗಿ ಡಿವೈಎಸ್ಪಿ ಕಟ್ಟೀಮನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ ಎನ್ನಲಾಗುತ್ತಿದೆ.
“ನಮ್ಮ ಕುಟುಂಬದ ಮೇಲೆ ಅನಗತ್ಯ ಕಾಟ ಕೊಡುತ್ತಿದ್ದಾರೆ. ನನ್ನನ್ನು ಅಪಹರಣ ಮಾಡಿಸಿದ್ದಾರೆಂದು ಮನೆಯವರಿಂದ ದೂರು ದಾಖಲಿಸಿದ್ದಾರೆ. ಡಿವೈಎಸ್ಪಿ ಕಟ್ಟಿಮನಿ ನಮ್ಮ ಕುಟುಂಬಕ್ಕೆ ಕಾಟ ಕೊಡುತ್ತಿದ್ದಾರೆ. ಡಿವೈಎಸ್ಪಿ ಕಟ್ಟೀಮನಿ ರಮೇಶ್ ಜಾರಕಿಹೊಳಿ ಪರ ಕೆಲಸ ಮಾಡುತ್ತಿದ್ದಾರೆ” ಎಂದು ಸಿಡಿ ಲೇಡಿ ಮುಖ್ಯ ನ್ಯಾಯಧೀಶರಿಗೆ ಬರೆದಿದ್ದಾರೆನ್ನಲಾದ ಪತ್ರ ಹರಿದಾಡುತ್ತಿದೆ.
ಒಂದು ವೇಳೆ ಯುವತಿ ಪತ್ರ ಬರೆದಿದ್ದೇ ನಿಜವಾದರೆ, ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿದ್ದೇ ಆದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ತಂತ್ರಕ್ಕೊಂದು ತಂತ್ರ ಈಗಾಗಲೇ ರಮೇಶ್ ಹಾಗೂ ಯುವತಿ ಮಾಡುತ್ತಿದ್ದಾರೆ. ಜೊತೆಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೂಡ ದಾಖಲಾಗಿದೆ.