‘ಬಂಡೆ’ದ್ದ ಸಿಡಿ ಲೇಡಿ ಬ್ರದರ್ : ‘ಡಿಕೆ ಶಿವಕುಮಾರ್ ವಿರುದ್ಧ ನಮ್ಮಲ್ಲಿ ಮತ್ತಷ್ಟು ಸಾಕ್ಷ್ಯಗಳಿವೆ’

‘ಡಿಕೆ ಶಿವಕುಮಾರ್ ವಿರುದ್ಧ ನಮ್ಮಲ್ಲಿ ಮತ್ತಷ್ಟು ಸಾಕ್ಷ್ಯಗಳಿವೆ’ ಎಂದು ಸಿಡಿ ಲೇಡಿ ಸಹೋದರರು ಆರೋಪಿಸಿದ್ದಾರೆ.

ಸಿಡಿ ಲೇಡಿ ತಾಯಿಯ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ಬೆಳಗಾವಿಯಿಂದ ವಿಜಾಪುರಕ್ಕೆ ಸಿಡಿ ಲೇಡಿ ಕುಟುಂಬ ಶಿಫ್ಟ್ ಆಗಿದೆ. ಈ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಸಿಡಿಲೇಡಿ ತಂದೆ ,” ನನ್ನ ಅತ್ತೆಗೆ ಆರೋಗ್ಯ ಸರಿಯಿಲ್ಲ. ಅತ್ತೆ ಅವರಿಗೆ ಜ್ವರ ಬಂದಿದೆ. ವೈದ್ಯರು ಹೇಳಿದಂತೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಬೆಳಗಾವಿ ಯಿಂದ ಅತ್ತೆಯನ್ನು ನೋಡಿಕೊಳ್ಳಲು ಬಂದಿದ್ದೇವೆ. ನಮಗೆ ಯಾವುದೇ ಒತ್ತಡ ಇಲ್ಲ. ನಮ್ಮ ಅತ್ತೆನೇ ನಮಗೆ ತಂದೆ-ತಾಯಿ ಇದ್ದಂತೆ. ಹೀಗಾಗಿ ನಾವು ಅವರೊಂದಿಗೆ ಇದ್ದು ನೋಡಿಕೊಳ್ಳುತ್ತೇವೆ” ಎಂದಿದ್ದಾರೆ.

ಜೊತೆಗೆ “ಮಗಳಿಗೆ ಮನೆಗೆ ಬರಲು ನಾವು ಮನವಿ ಮಾಡಿಕೊಳ್ಳುತ್ತೇವೆ. ನಾವು ಈಗಾಗಲೇ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಮತ್ತೆ ಕುಗ್ಗಲು ತಯಾರಿಲ್ಲ. ಅವಶ್ಯಕತೆ ಇದ್ದರೆ ನಾವೇ ನಿಮ್ಮನ್ನು ಕರೆದು ಹೇಳಿಕೆ ಕೊಡುತ್ತೇವೆ. ಅಲ್ಲಿಯವೆರೆಗೂ ನಮಗೆ ತೊಂದರೆ ಕೊಡಬೇಡಿ, ಮಗಳ ಭೇಟಿಗೆ ಅವಕಾಶ ಕೊಡಿ ” ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಸಿಡಿ ಲೇಡಿ ಸಹೋದರ, ” ನಮ್ಮ ಅಕ್ಕ ನಮ್ಮೊಂದಿಗೆ ಮಾತನಾಡಿ 27 ದಿನಗಳಾಯ್ತು. ಅವಳು ಎಷ್ಟೇ ಬ್ಯೂಸಿ ಇದ್ದರು ನಮ್ಮೊಂದಿಗೆ ಮಾತನಾಡುತ್ತಿದ್ದಳು. ಮಾತನಾಡಿಲ್ಲ ಅಂದರೆ ಆಕೆಗೆ ಒತ್ತಡ ಇದೆ. ಅದು ಬೇರೆ ಯಾರು ಅಲ್ಲ ಡಿಕೆ ಶಿವಕುಮಾರ್ ದ್ದೇ ಒತ್ತಡ ಇದೆ. ಡಿಕೆ ಶಿವಕುಮಾರ್ ವಿರುದ್ಧ ನಮ್ಮಲ್ಲಿ ಮತ್ತಷ್ಟು ಸಾಕ್ಷ್ಯಗಳಿವೆ. ಸಿಡಿ ಕೇಸ್ ಹಿಂದೆ ಡಿಕೆಶಿ ಇದ್ದಾರೆ. ಎಸ್ಐಟಿ ತನಿಖೆ ಸರಿಯಾಗೇ ನಡೆಯುತ್ತಿದೆ. ಅದರ ಮೇಲೆ ನಂಬಿಕೆ ಇದೆ. ಕೊನೆಗೆ ಸತ್ಯ ಬಯಲಾಗುತ್ತದೆ” ಎಂದು ಹೇಳಿದ್ದಾರೆ.

ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದ ಸಿಡಿ ಲೇಡಿ ಪ್ರಕರಣ ಇನ್ನೇನು ಅಂತ್ಯ ಕಾಣುವ ಸಾಧ್ಯತೆ ಇದೆ. ಯಾಕೆಂದ್ರೆ ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ಕೊಟ್ಟಿದ್ದು, ಎಸ್ಐಟಿ ಮೊನ್ನೆಯಿಂದ ಸಿಡಿ ಯುವತಿಯನ್ನು ವಿಚಾರಣೆ ಮಾಡುತ್ತಿದೆ. ಇಂದು ಸ್ಥಳ ಮಹಜರು ಮಾಡಲು ಯುವತಿಯನ್ನು ಆರ್.ಟಿ ನಗರಕ್ಕೆ ಕರೆದುಕೊಂಡು ಹೋಗಲಾಗಿದೆ.

ಸಿಡಿ ಲೇಡಿ ಹೇಳಿಕೆ ಬಳಿಕ ರಮೇಶ್ ಜಾರಕಿಹೊಳಿ ವಿಚಾರಣೆ ಮಾಡಲಾಗುತ್ತದೆ. ಈ ವೇಳೆ ಸೂಕ್ತ ದಾಖಲೆಗಳು ಹೇಳಿಕೆಗಳು ರಮೇಶ್ ಜಾರಕಿಹೊಳಿಯಿಂದ ಸಿಗದೇ ಹೋದರೆ ಸಾಹುಕಾರ್ ಬಂಧನ ಕಟ್ಟಿಟ್ಟಬುತ್ತಿ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights