ಕೊರೊನಾ ಉಲ್ಬಣ: ಆಗ ಈಜುಕೊಳದಲ್ಲಿ- ಈಗ ಕಂಡವರ ಹೆಂಡತಿಯರ ಲೆಕ್ಕದಲ್ಲಿ ಸಚಿವ ಬ್ಯುಸಿ: ಕಾಂಗ್ರೆಸ್ ಟಾಂಗ್
ಇತ್ತೀಚೆಗೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕರ್ನಾಟಕ ಕಾಂಗ್ರೆಸ್, ಆರೋಗ್ಯ ಸಚಿವ ಕೆ. ಸುಧಾರಕ್ ಅವರನ್ನು ಲೇವಡಿ ಮಾಡಿದೆ.
ಕೊರೊನಾ ಉಲ್ಬಣದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಕಳೆದ ವರ್ಷ ಕರೋನಾ ಬಂದಾಗ ಸ್ವಿಮ್ಮಿಂಗ್ ಫೂಲ್ನಲ್ಲಿ ಮೋಜು ಮಾಡುತ್ತಿದ್ದರು. ಈ ಭಾರಿ ಕರೋನಾ ಉಲ್ಬಣಿಸಿದಾಗ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಸುಧಾಕರ್ ಬ್ಯುಸಿಯಾಗಿದ್ದಾರೆ. ಆಂತರಿಕ ಕಚ್ಚಾಟ, ಸಿಡಿ ಕಳ್ಳಾಟದಲ್ಲಿ ಮುಳುಗಿದ ಬಿಜೆಪಿ ಸರ್ಕಾರ ಕರೋನಾ ನಿರ್ವಹಿಸುವುದರಲ್ಲಿ ಸೋತಿದೆ ಎಂದು ಕಿಡಿ ಕಾರಿದೆ.
ಕಳೆದ ವರ್ಷ ಕರೋನಾ ಬಂದಾಗ ಸ್ವಿಮ್ಮಿಂಗ್ ಫೂಲ್ನಲ್ಲಿ ಮೋಜು ಮಾಡುತ್ತಿದ್ದರು.
ಈ ಭಾರಿ ಕರೋನಾ ಉಲ್ಬಣಿಸಿದಾಗ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ @mla_sudhakar
ಆಂತರಿಕ ಕಚ್ಚಾಟ, ಸಿಡಿ ಕಳ್ಳಾಟದಲ್ಲಿ ಮುಳುಗಿದ @BJP4Karnataka ಸರ್ಕಾರ ಕರೋನಾ ನಿರ್ವಹಿಸುವುದರಲ್ಲಿ ಸೋತಿದೆ pic.twitter.com/IfeUL9cYJu
— Karnataka Congress (@INCKarnataka) April 6, 2021
ಕೋವಿಡ್ ಟೆಸ್ಟ್ಗಳನ್ನು ಕಡಿಮೆ ಮಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಕುಳಿತಿದ್ದರ ಪರಿಣಾಮವಿದು. ಸಂಪೂರ್ಣ ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್ಗಳ ಮಾರ್ಕೆಟಿಂಗ್ ಮಾಡುವುದರಲ್ಲಿ ಮುಳುಗಿದ್ದರ ಪರಿಣಾಮವಿದು. #ಸೋಂಕಿತಸರ್ಕಾರ ಕರೋನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸಿದ್ದರ ಪರಿಣಾಮ ಇದು. ಇಂದು ಸೋಂಕು ದಾಖಲೆ ಮಟ್ಟಕ್ಕೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Read Also: ನಿಜವಾಯ್ತು ಏನ್ಸುದ್ದಿ ಅನುಮಾನ!: ಅಂತೂ ರಮೇಶ್ ಜಾರಕಿಹೊಳಿಗೆ ಬಂತು ಕೊರೊನಾ!