ಬಾವಿ ದುರಂತ : ಸಾವಿನ ಸಂಖ್ಯೆ 11ಕ್ಕೇರಿಕೆ – ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ನೆರವು!
ಮಧ್ಯಪ್ರದೇಶದ ಬಾವಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೇರಿಕೆಯಾಗಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜ್ ಬಸೋದಾ ಪ್ರದೇಶದ ಲಾಲ್ ಪತಾರ್ ಗ್ರಾಮದಲ್ಲಿ ಗುರುವಾರ (ಜುಲೈ 15) ರಾತ್ರಿ 9 ರ ಸುಮಾರಿಗೆ ಬಾವಿಗೆ ಬಿದ್ದ ಬಾಲಕನನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಗೋಡೆ ಕುಸಿದು 30 ಜನರು ಬಾವಿಗೆ ಬಿದ್ದಿದ್ದರು. ಇವರ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು ಬಾವಿಯಿಂದ ಹನ್ನೊಂದು ಶವಗಳನ್ನು ಹೊರತೆಗೆಯಲಾಗಿದೆ. ಜೊತೆಗೆ ಹತ್ತೊಂಬತ್ತು ಜನರನ್ನು ರಕ್ಷಿಸಲಾಗಿದೆ.
ಪ್ರಧಾನ ಮಂತ್ರಿಗಳ ಕಚೇರಿ ಟ್ವಿಟರ್ ಪೋಸ್ಟ್ ನೀಡಿ, ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ನೆರವು ಘೋಷಿಸಿದೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಟ್ವಿಟರ್ ಪೋಸ್ಟ್ನಲ್ಲಿ ಪ್ರಕಟಿಸಿದ್ದಾರೆ. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಮತ್ತು ಗಾಯಗೊಂಡ ಪ್ರತಿಯೊಬ್ಬರಿಗೂ 50,000 ನೆರವು ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಘಟನೆ ನಡೆದಿದ್ದು ಹೇಗೆ..?
ರಾತ್ರಿ ಬಾವಿಗೆ ಬಿದ್ದ ಬಾಲಕನ್ನು ರಕ್ಷಿಸಲು ಕೆಲವರು ಬಾವಿಯಿಂದ ಕೆಳಗಿಳಿದರು ಮತ್ತು ಇತರರು ಅವರಿಗೆ ಸಹಾಯ ಮಾಡಲು ಸುತ್ತಮುತ್ತಲಿನ ಪ್ಯಾರಪೆಟ್ ಮೇಲೆ ನಿಂತಿದ್ದರು.
ಜನರ ತೂಕ ಹೆಚ್ಚಾಗಿ ಪ್ಯಾರಪೆಟ್ ಕುಸಿದಿದೆ ಮತ್ತು ಎಲ್ಲರೂ ಬಾವಿಗೆ ಬಿದ್ದಿದ್ದಾರೆ. ಈ ಬಾವಿ ಸುಮಾರು 50 ಅಡಿ ಆಳ ಮತ್ತು 20 ಅಡಿಗಳಷ್ಟು ನೀರನ್ನು ಹೊಂದಿದೆ. ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾದ ಟ್ರ್ಯಾಕ್ಟರ್ ನಾಲ್ಕು ಪೊಲೀಸರೊಂದಿಗೆ ಬಾವಿಗೆ ಇಳಿದು ಹತ್ತೊಂಬತ್ತು ಜನರನ್ನು ರಕ್ಷಿಸಿದೆ.
ರಾಜ್ಯ ಸಚಿವರಾದ ವಿಶ್ವಾಸ್ ಸರಂಗ್ ಮತ್ತು ಗೋವಿಂದ್ ಸಿಂಗ್ ರಜಪೂತ್ ಸ್ಥಳದಲ್ಲಿಯೇ ರಕ್ಷಣಾ ಕಾರ್ಯದ ಬಗ್ಗೆ ನಿಗಾ ವಹಿಸಿದ್ದರು.