ಸುರಿವ ಮಳೆಯಲ್ಲಿ ಕೊಡೆ ಹಿಡಿದು ಗಿಡಗಳಿಗೆ ನೀರು ಹಾಕಿದ ಮಧ್ಯಪ್ರದೇಶ ಸಿಎಂ; ನೆಟ್ಟಿಗರಿಂದ ಟ್ರೋಲ್
ಸುರಿಯುವ ಮಳೆಯ ನಡುವೆಯೂ ಸಹಾಯಕನೋರ್ವ ಕೊಡೆ ಹಿಡಿದುಕೊಂಡು, ಅದರಡಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಾಪಕ ಟ್ರೋಲ್ ಗೆ ಒಳಗಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರ ಪ್ರಚಾರ ತಂಡದ ಅಧಿಕಾರಿಯೋರ್ವರು, “ಹವಾಮಾನ ಪ್ರತಿಕೂಲವಾಗಿದ್ದರೂ ಸಹ ಮುಖ್ಯಮಂತ್ರಿಗಳು ಪ್ರತಿದಿನ ಗಿಡಗಳನ್ನು ನೆಡುತ್ತಾರೆ. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು” ಎಂದು ಹೇಳಿದ್ದಾರೆ.
ಟೈಲ್ಸ್ ಮೇಲೆ ನಿಂತು ಗಿಡಕ್ಕೆ ನೀರು ಹಾಕುತ್ತಿರುವ ಚೌಹಾಣ್ ಕುರಿತು ಪ್ರತಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ.
“ಮಣ್ಣಿನ ಮಗ, ರೈತನ ಮಗ, ದುಬಾರಿ ಬೆಲೆಯ ಟೈಲ್ಸ್ ಮೇಲೆ ನಿಂತುಕೊಂಡು ಮಳೆಯ ನಡುವೆ ಕೊಡೆ ಹಿಡಿದುಕೊಂಡು ಗಿಡಗಳಿಗೆ ನೀರುಣಿಸುತ್ತಿರುವ ಅಪರೂಪದ ದೃಶ್ಯ” ಎಂದು ವ್ಯಂಗ್ಯವಾಡಿದೆ.
बारिश में पौधे को पानी कौन देता है शवराज जी?@ChouhanShivraj @narendramodi pic.twitter.com/Gs9w8kxblg
— Ganesh Majhi (@GaneshM67809042) September 11, 2021
कुछ तो सादगी है इस बंदे में वर्ना इतनी भारी बरसात में छतरी तले पेड़ को पानी देने की ज़हमत कौन करता @vdsharmabjp @ChouhanShivraj @OfficeofSSC @ks_chauhan23 @BJP4MP @JansamparkMP @PMOIndia @SadhnaShivraj @drnarottammisra pic.twitter.com/1dvTOE4wsG
— akhand mehra (@AkhandMehra) September 11, 2021