ದೆಹಲಿಯಿಂದ ದಂಪತಿ ಅಪಹರಣ : ಮಧ್ಯಪ್ರದೇಶದಲ್ಲಿ ಕೊಲೆ – ವಿವಿಧ ರಾಜ್ಯಗಳಲ್ಲಿ ಶವ!

ದೆಹಲಿಯಿಂದ ದಂಪತಿಯನ್ನು ಅಪಹರಿಸಿ ಮಧ್ಯಪ್ರದೇಶದಲ್ಲಿ ಕೊಲೆ ಮಾಡಿ ಶವಗಳನ್ನು ವಿವಿಧ ರಾಜ್ಯಗಳಲ್ಲಿ ಎಸೆದ ಭಯಾನಕ ಘಟನೆ ನಡೆದಿದೆ.

ಮೃತ ದಂಪತಿಗಳು ಉತ್ತರ ಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ. ಇವರನ್ನು ದೆಹಲಿಯಿಂದ ಅಪಹರಿಸಿ ಮಧ್ಯಪ್ರದೇಶದಲ್ಲಿ ಕೊಲೆ ಮಾಡಿ ನಂತರ ಎರಡು ವಿಭಿನ್ನ ರಾಜ್ಯಗಳಲ್ಲಿ ಎಸೆಯಲಾಗಿದೆ. ಯುವಕನ ಶವವನ್ನು ರಾಜಸ್ಥಾನದಲ್ಲಿ ಎಸೆಯಲಾಗಿದ್ದರೆ, ಪತ್ನಿಯ ಶವವನ್ನು ಮಧ್ಯಪ್ರದೇಶದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಯುಪಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ನೆರೆಹೊರೆಯವರಾಗಿದ್ದ ವಯಸ್ಕ ಯುವಕ ನೆರೆಯ ಅಪ್ರಾಪ್ತ ಹುಡುಗಿಯನ್ನು ಪ್ರೀತಿಸಿದ್ದನು. ಇವರಿಬ್ಬರು ಕುಟುಂಬಸ್ಥರ ಮನವೊಲಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಜುಲೈ 31 ರಂದು ಮನೆಯಿಂದ ಓಡಿ ಹೋಗಿ ಮದ್ವೆ ಮಾಡಿಕೊಂಡಿದ್ದರು. ಕೋಪಗೊಂಡ ಬಾಲಿಕ ಕುಟುಂಬಸ್ಥರು ದಂಪತಿಗಳನ್ನು ಹುಡುಕಲು ಆರಂಭಿಸಿದ್ದಾರೆ. ಕೊನೆಗೆ ದೆಹಲಿಯಲ್ಲಿ ಇವರಿಬ್ಬರನ್ನು ಬಾಲಕಿ ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ಜೀಪ್‌ನಲ್ಲಿ ಅಪಹರಿಸಿ ಮಧ್ಯಪ್ರದೇಶದ ಭಿಂದ್‌ಗೆ ಕರೆದೊಯ್ದಿದ್ದಾರೆ. ಬಳಿಕ ಆತನ ಖಾಸಗಿ ಭಾಗಗಳಿಗೆ ಚಾಕು ಹಾಕಿ ಅಂಗವನ್ನು ಹಾನಿಗೊಳಿಸಿ ಕೊಲೆ ಮಾಡಿದ್ದಾರೆ. ಹಗ್ಗದಿಂದ ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ.

ಮಧ್ಯಪ್ರದೇಶದ ಭಿಂದ್‌ ನಲ್ಲಿ ಆಗಸ್ಟ್ 5 ರಂದು ಮೃತನ ಶವ ಪತ್ತೆಯಾದರೆ ರಾಜಸ್ಥಾನದ ಧೋಲ್ಪುರ್ ಪ್ರದೇಶದಲ್ಲಿ ಬಾಲಕಿ ಶವ ಪತ್ತೆಯಾಗಿದೆ.

ಇತ್ತ ಉತ್ತರ ಪ್ರದೇಶದಲ್ಲಿ ಮೃತ ಯುವಕನ ತಂದೆ ಆಗಸ್ಟ್ 10 ರಂದು ತನ್ನ ಮಗನ ಬಗ್ಗೆ ನಾಪತ್ತೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ರಾಜಸ್ಥಾನದಲ್ಲಿ ಬಾಲಕಿಯ ಮೃತದೇಹ ಪತ್ತೆಯಾದ ನಂತರ ಅವರ ವಯಸ್ಸಿನ ಸಾದೃಶ್ಯದಿಂದಾಗಿ ಎರಡು ಸಾವುಗಳ ನಡುವೆ ಸಂಬಂಧವಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಬಾಲಕಿಯ ಫೋನ್ ಕಾಲ್ ಲಿಸ್ಟ್ ನೋಡಿದಾಗ ಪೊಲೀಸರ ಅನುಮಾನ ನಿಜವಾಗಿದೆ. ಬಾಲಕಿಯ ಕುಟುಂಬ ಈ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ತನಿಖೆ ವೇಳೆ ಬಾಲಕಿಯ ಕುಟುಂಬ ಕೊಲೆ ಆರೋಪಿವನ್ನು ಒಪ್ಪಿಕೊಂಡಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights