ರಜನಿ ‘ದರ್ಬಾರ್’ ಗೆ ವಿರೋಧ : ಕನ್ನಡದಲ್ಲಿ ‘ದರ್ಬಾರ್’ ರಿಲೀಸ್ ಮಾಡಲು ಪಟ್ಟು
ತಲೈವಾ ರಜಿನಿಕಾಂತ ಅವರ ಬಹುನಿರೀಕ್ಷಿತ ‘ದರ್ಬಾರ್’ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗದ ಹಿನ್ನಲೆಯಲ್ಲಿ ಬೆಂಗಳೂರಿನ ನರ್ತಕಿ ಸಿನಿಮಾ ಮಂದಿರದ ಬಳಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹೌದು.. ಇಂದು ತಲೈವಾ ನ ತಮ್ಮೊಂದು ಅವತಾರವನ್ನ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಇದಕ್ಕೆ ಕಾರಣ ರಜಿನಿಕಾಂತ ಸಿನಿಮಾ ದರ್ಬಾರ್ ಇಂದು ತೆರೆಕಂಡಿದ್ದು, ಕನ್ನಡದಲ್ಲಿ ತೆರೆ ಕಾಣುವ ನಿರೀಕ್ಷೆಯನ್ನ ಸೂಪರ್ ಸ್ಟಾರ್ ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ ಇದಾಗದೇ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದ್ದರ ಹಿನ್ನೆಲೆಯಲ್ಲಿ ಅಭಿಮಾನಿಗಳು ಪ್ರತಿಭಟನೆಗಿಳಿದಿದ್ದಾರೆ.
ಪರಿಣಾಮ ಚಿತ್ರಮಂದಿರ ಮುತ್ತಿಗೆಗೆ ಯತ್ನ ಮಾಡಿದ್ದಾರೆ. ಕನ್ನಡದಲ್ಲಿ ದರ್ಬಾರ್ ಸಿನಿಮಾ ರಿಲೀಸ್ ಆಗ್ತಾಯಿಲ್ಲ ಅನ್ನೋ ಕಾರಣಕ್ಕೆ ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿ ಮುತ್ತಿಗೆಗೆ ಮುಂದಾಗಿದ್ದಾರೆ. ಕೆಲ ಕಾಲ ಸಿನಿಮಾ ಮಂದಿರದ ಬಳಿ ಭಯದ ವಾತಾವರಣೆ ಸೃಷ್ಟಿಯಾಗಿತ್ತು.
ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.