ಸಿಲಿಂಡರ್ ಸ್ಪೋಟ : ನೆಲಕ್ಕಚ್ಚಿದ ಮನೆ, ಸಾಮಗ್ರಿಗಳು ಛಿದ್ರ ಛಿದ್ರ…!
ಸಿಲಿಂಡರ್ ಸ್ಪೋಟ ಹಿನ್ನೆಲೆ ಮನೆ ಸಂಪೂರ್ಣ ಧ್ವಂಸವಾದ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಸೇನಬಿ ಸಾಬಣ್ಣನವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯವರು ಹೊಲಕ್ಕೆ ಕೆಲಸಕ್ಕೆ ಹೋದಾಗ ಸ್ಪೋಟಗೊಂಡು ಮನೆ ಸಂಪೂರ್ಣ ನಾಶವಾಗಿದೆ. ಅದೃಷ್ಟವಶಾತ್ ಈ ದುರ್ಘಟನೆ ನಡೆದಾಗ ಮನೆಯಲ್ಲಿ ಯಾರು ಇರಲಿಲ್ಲ.
ಸಿಲಿಂಡರ್ ಸ್ಪೋಟದ ತೀವ್ರತೆಗೆ ಸಿಲೆಂಡರ್, ಮನೆಯ ಸಾಮಗ್ರಿಗಳು ಛಿದ್ರ ಛಿದ್ರಗೊಂಡಿವೆ. ಗ್ರಾಮೀಣ ಠಾಣೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.