ಕಾಂಗ್ರೆಸ್‌ಗೆ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ; ನಾನಿನ್ನೂ ನಿರ್ಧರಿಸಿಲ್ಲ: ಮಧು ಬಂಗಾರಪ್ಪ

ಕಾಂಗ್ರೆಸ್‌ ಸೇರಲು ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಆದರೆ, ಕಾಂಗ್ರೆಸ್‌ ಸೇರುವ ಬಗ್ಗೆ ನಿರ್ಧಾರ ಮಾಡಿಲ್ಲ. ನಾನು ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದೇನೆ. ಆದರೆ, ಪಕ್ಷದ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.

ಕಾಂಗ್ರೆಸ್‌ ಸೇರುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ‌ಆಹ್ವಾನಿಸಿದ್ದು, ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. “ಜೆಡಿಎಸ್‌ ಪಕ್ಷದಲ್ಲಿ ಸಹಜವಾಗಿಯೇ ಗೊಂದಲವಿದೆ. ಪಕ್ಷ ಅಧಿಕಾರದಲ್ಲಿದ್ದಾಗ ನಮ್ಮವರಿಗೇ ಸ್ಥಾನಮಾನ ನೀಡಲಿಲ್ಲ. ಹೀಗಾಗಿಯೇ ವಿಶ್ವನಾಥ್‌ ಅವರು ಪಕ್ಷ ಬಿಟ್ಟು ಹೋದರು,” ಎಂದ ಅವರು, ತಾವು ಮಾತ್ರವಲ್ಲದೆ ಜೆಡಿಎಸ್‌ ಪಕ್ಷವೇ ಸುಮ್ಮನಾಗಿ ಕುಳಿತಿದೆ ಎಂದರು.

ಮುಖ್ಯಮಂತ್ರಿಗಳ ಮಕ್ಕಳು ನಿಯತ್ತಾಗಿ ಮುಂದೆ ಹೋಗಬೇಕೇ ಹೊರತು, ಅಡ್ಡದಾರಿಯಲ್ಲಿ ಹೋಗಬಾರದು. ನಮ್ಮ ತಂದೆಯವರು ನಮಗೆ ಕೆಟ್ಟ ದಾರಿಯಲ್ಲಿ ಹೋಗುವುದನ್ನು ಹೇಳಿಕೊಟ್ಟಿಲ್ಲ. ಒಳ್ಳೆಯ ದಾರಿಯಲ್ಲಿ ಹೋದ ಪರಿಣಾಮ ನಾಲ್ಕು ಬಾರಿ ಸೋತಿದ್ದೇನೆ ಎಂದರು.


ಇದನ್ನೂ ಓದಿ: ಸಿ.ಪಿ ಯೋಗೇಶ್ವರ್‌ಗೆ ಮಂತ್ರಿಗಿರಿ ನೀಡದಂತೆ ಬಿಎಸ್‌ವೈ ಆಪ್ತರ ಲಾಬಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights