‘ಪ್ರವಾದಿಗೆ ಕೋಪ ಬಂದರೆ ತಲೆ ದೇಹದಿಂದ ಬೇರ್ಪಡುವುದು’ : ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡಿದ ಬರಹ..!

ಮಂಗಳೂರಿನಲ್ಲಿ ಶಾಂತಿ ಕದಡಿದ್ದ ಗೋಡೆ ಬರಹ ಮತ್ತೆ ಅತಹದ್ದೇ ಆದ ಬರಹದೊಂದಿಗೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ‘ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್’ ಎಂದು ಗೋಡೆ ಮೇಲೆ ಬರೆಯಲಾಗಿತ್ತು. ಸದ್ಯ ಮತ್ತೆ ಅದೇ ರೀತಿಯ ಬರಹ ಕಂಡು ಬಂದಿದ್ದು ವಿವಾದ ಸೃಷ್ಟಿ ಮಾಡಿದೆ.

ಪದೇ ಪದೇ ಇದೇ ರೀತಿಯ ಬರಹದಿಂದ ಕರಾವಳಿಯಲ್ಲಿ ಆತಂಕ ಎದುರಾಗಿದೆ. ಪೊಲೀಸರು ದೇಶದ್ರೋಹಿಗಳ ಬೆನ್ನಟ್ಟಿದ್ದಾರೆ. ಆದರೆ ಈ ಬೆನ್ನಲ್ಲೇ ಮತ್ತೊಂದು ಕಡೆ ಬರಹ ಈಗ ವಿಚಾದ ಸೃಷ್ಟಿ ಮಾಡಿದೆ. ಹೌದು… ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಕ್ರ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟಮೆಂಟ್ ನ ಗೋಡೆ ಮೇಲೆ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹಾಕಿ ಗೋಡೆ ಬರಹ ಬರೆಯಲಾಗಿತ್ತು. ಗೋಡೆಯಲ್ಲಿ ಸಿಕ್ಕ ಸಂದೇಶ ಇಡೀ ಕರಾವಳಿಯನ್ನೇ ಆತಂಕಕ್ಕೆ ದೂಡಿತ್ತು. ಈ ಗೋಡೆ ಬರಹ ಕರಾವಳಿಯಲ್ಲಿ ಕಿಚ್ಚು ಹೆಚ್ಚಿಸಿತ್ತು. ಹೋಂಡಾ ಆಕ್ಟಿವಾದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ರು. ಆ ದೇಶದ್ರೋಹಿಗಳ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಈ ರೀತಿಯ ಗೋಡೆ ಬರಹ ೀಗ ಮಂಗಳೂರಿನಲ್ಲಿ ಕಾಣಿಸಿದೆ.

ಮಂಗಳೂರಿನ ಕೋರ್ಟ್ ರಸ್ತೆಯಲ್ಲಿ ಈ ರೀತಿಯ ಗೋಡೆಯ ಬರಹವನ್ನು ಬರೆಯಲಾಗಿದೆ. ಇದು ಕೋರ್ಟ್ ರಸ್ತೆಯಲ್ಲಿರುವ ಹಳೇ ಪೊಲೀಸ್ ಔಟ್ ಪೋಸ್ಟ್. ಇದರ ಮೇಲೆ ಕಿಡಿಗೇಡಿಗಳು, ‘Gustuk e Rasool ek hi saza sar tan say juda’ ಎಂದು ಗೋಡೆಬರಹ ಬರೆದಿದ್ದಾರೆ. ಪ್ರವಾದಿಗೆ ಕೋಪ ಬಂದರೆ ತಲೆ ದೇಹದಿಂದ ಬೇರ್ಪಡುವುದು ಎಂಬ ಅರ್ತ ನೀಡುವ ಬರವಣಿಗೆ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿಟಿ ರವಿ, ಉಗ್ರವಾದವನ್ನು ಸಹಿಸಿಕೊಳ್ಳಲು ದೇಶದಲ್ಲಿ ಜಾಗವಿಲ್ಲ, ಉಗ್ರವಾದಿಗಳು ಹೋಗಬೇಕಾಗಿದ್ದು ಮಸಣಕ್ಕೆ ಮಾತ್ರ. ಖದರ್ ಸ್ಥಾನಕ್ಕೆ ಕಳುಹಿಸುವಂಥ ಕೆಲಸವನ್ನು ಸೈನಿಕರು ಹಾಗೂ ಪೊಲೀಸರು ಸಮರ್ಥವಾಗಿ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ದುಷ್ಕರ್ಮಿಗಳು ಎಚ್ಚರಿಕೆಯಿಂದರಬೇಕು ಅಂತ ಹೇಳಿದ್ದಾರೆ.

ಮಾಜಿ ಸಚಿವ ಯುಟಿ ಖಾದರ್ ಈ ಬಗ್ಗೆ ಪ್ರತಿಕ್ರಿಯಿಸಿ, ನಗರದಲ್ಲಿ ಗೋಡೆ ಬರಹ ಬರೆಯುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಇದನ್ನ ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇದರ ಪತ್ತೆಗೆ ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿ. ಇವರಿಗೆ ಬೆಂಬಲವಾಗಿರುವರನ್ನ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಗೇಹ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತವೆ. ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. ಅದು ಬಿಟ್ಟು 15 ದಿನದ ಒಳಗೆ ಬಂಧನ ಆಗದೇ ಇದ್ರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ. ಅವರು ಮಾನಸಿಕ ಅಸ್ವಸ್ಥ ಆಗಿರಲಿ, ಯಾರೇ ಆಗಿರಲಿ ಅರೆಸ್ಟ್ ಮಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಜವಬ್ದಾರಿ ಅಲ್ವಾ? ರಾಜ್ಯ ಸರ್ಕಾರ ಇಂದು ಕೋಮಾ ಸ್ಥಿತಿಯಲ್ಲಿ ಇದೆ ಅಂತ ಟೀಕಿಸಿದ್ದಾರೆ. ಸದ್ಯ ಗೋಡೆಬರಹ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೋರ್ಟ್ ರಸ್ತೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣ ರಾಜಕೀಯ ತಿರುವ ಪಡೆದು ಹಳ್ಳ ಹಿಡಿಯೋದಕ್ಕೂ ಮೊದಲು ಪೊಲೀಸರು ಆರೋಪಿಗಳನ್ನ ಬಂಧಿಸುವ ಅವಶ್ಯಕತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights