ಬೆಂಕಿ ಹಚ್ಚಿದ ಟೈರ್ ಎಸೆದು ಆನೆ ಕೊಂದ ದುಷ್ಕರ್ಮಿಗಳು: ಅಸಹಾಯಕ ಆನೆಯ ವೈರಲ್ಆದ ವಿಡಿಯೋ
ಖಾಸಗಿ ರೆಸಾರ್ಟ್ ವೊಂದಕ್ಕೆ ನುಗ್ಗಿದ ಆನೆಯ ಮೇಲೆ ಬೆಂಕಿ ಹಚ್ಚಿದ ಟೈರ್ ಎಸೆದು, ಅಮಾನುಷವಾಗಿ ಕೊಂದಿರುವ ಘಟನೆ ತಮಿಳುನಾಡಿದ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ನಡೆದಿದೆ.
ದಾರಿ ತಪ್ಪಿದ ಆನೆ ರೆಸಾರ್ಟ್ಗೆ ಬಂದಿದ್ದು, ಈ ಆನೆ ಮೇಲೆ ದುಷ್ಕರ್ಮಿಗಳು ಬೆಂಕಿಯ ಟೈರ್ ಎಸೆದಿದ್ದಾರೆ. ಇದರಿಂದ ಆನೆ ಗಂಭೀರವಾಗಿ ಗಾಯಗೊಂಡಿದ್ದು , ಕಿವಿಯಲ್ಲಿ ತೀವ್ರ ರಕ್ತಸ್ರಾವಗೊಂಡಿದೆ. ನೋವಿನಿಂದ ಬಳಸುತ್ತಿದ್ದ ಆನೆಯನ್ನು ಮಸಿನಗುಡಿಯ ಫಾರೆಸ್ಟ್ ಗಾರ್ಡ್ ಕಣ್ಣಿಗೆ ಬಿದ್ದಿದೆ. ತಕ್ಷಣಕ್ಕೆ ಗಾಯಗೊಂಡ ಆನೆಯನ್ನು ಸಮೀಪದ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಪ್ರಯತ್ನ ನಡೆಸಲಾಗಿದೆ. ಆದರೆ, ಸುಟ್ಟ ಗಾಯಗಳಿಂದ ಗಂಭೀರವಾಗಿ ಬಳಲಿದ್ದ ಆನೆ ಮಾರ್ಗ ಮಧ್ಯೆಯಲ್ಲಿಯೇ ಕೊನೆ ಉಸಿರೆಳೆದಿದೆ.
ಘಟನೆ ಸಂಬಂಧ ವಿಶೇಷ ತಂಡ ರಚಿಸಿದ ಅರಣ್ಯ ಅಧಿಕಾರಿಗಳು, ಆನೆಯ ದಾರುಣ ಸಾವಿಗೆ ಕಾರಣರಾದ ರೆಸಾರ್ಟ್ನ ರೇಮಂಡ್ ಮತ್ತು ಪ್ರಶಾಂತ್ ಎಂಬುವವರನ್ನು ಬಂಧಿಸಿದ್ದಾರೆ.
ಆನೆಯ ಮೇಲೆ ಉದ್ದೇಶ ಪೂರ್ವಕವಾಗಿ ಬೆಂಕಿ ಟೈರ್ ಎಸೆದಿರುವ ದೃಶ್ಯಗಳನ್ನು ಬಂಧಿತರ ಮೊಬೈಲ್ನಲ್ಲಿ ಸೆರೆಯಾಗಿವೆ. ವಿಡಿಯೋವನ್ನು ಅರಣ್ಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
https://twitter.com/PraveenIFShere/status/1352614252738056193?s=20
ರೆಸಾರ್ಟ್ನ ಸಿಬ್ಬಂದಿಗಳು ಬೆಂಕಿ ಮೂಲಕ ಆನೆಯನ್ನು ಎದುರಿಸಲು ಈ ರೀತಿ ಮಾಡಿದ್ದಾರೆ.
ಗಾಯಗೊಂಡ ಆನೆ ಬಳಿಕ ಅಣೆಕಟ್ಟಿನ ಬಳಿ ಮಲಗಿದೆ. ಪಶುವೈದ್ಯರು ತಕ್ಷಣವೇ ಅದಕ್ಕೆ ಚಿಕಿತ್ಸೆ ನೀಡಿ ನೋವು ಶಮನವಾಗುವಂತೆ ಮಾಡಿದರೂ ಅದು ವ್ಯರ್ಥವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಆನೆಯ ಕೊಲೆ : ಬಂಧಿತ ಆರೋಪಿ ಬಿಚ್ಚಿಟ್ಟ ಸತ್ಯ ಹೇಳಿದ್ರೆ ಶಾಕ್ ಆಗ್ತೀರಾ…!