FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರ ಪಲಾಯನದ ನಂತರ ಆ ದೇಶ ಅಕ್ಷರಶಹ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು ಮತ್ತು ಹಿಂದೂ ದೇವಾಲಯಗಳ ಮೇಲಿನ ದಾಳಿಯ ಕುರಿತು ಕೂಡ ಹಲವು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
बांग्लादेश के 64 में से 61 जिलों में हिंदुओं की आबादी दूसरे नंबर पर है.
बांग्लादेशी मीडिया का दावा है कि 27 जिलों में हिंदुओं को निशाना बनाया जा रहा है, हिन्दू समुदाय और मंदिरों पर हमले हो रहे है. इस बीच भारत में बांग्लादेश के हालात पर सर्वदलीय बैठक जारी है. भारत को तुरंत… pic.twitter.com/oEJUjkWdnl
— हम लोग We The People (@ajaychauhan41) August 6, 2024
ಬಾಂಗ್ಲಾದೇಶದಲ್ಲಿ ಹಿಂದುಗಳು ಅತಂತ್ರರಾಗಿದ್ದಾರೆ. ಹಿಂದೂ ದೇವಾಲಯಗಳನ್ನ ಕಂಡ ಕಂಡಲ್ಲಿ ಸುಟ್ಟು ಹಾಕುತ್ತಿದ್ದಾರೆ.” ಎಂದು ಕಟ್ಟಡವೊಂದು ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 5 ಆಗಸ್ಟ್ 2024 ರಂದು ಕಲ್ಬೇಲ ಎಂಬ ಬಾಂಗ್ಲಾದೇಶದ ಸುದ್ದಿ ವೆಬ್ ತಾಣವೊಂದರ ವರದಿಯೊಂದು ಲಭ್ಯವಾಗಿದೆ. ಈ ವರದಿಯಲ್ಲಿ ವೈರಲ್ ಪೋಸ್ಟ್ ನಲ್ಲಿ ಹಂಚಿಕೊಂಡ ಅಂಶಗಳ ಉಲ್ಲೇಖವೇ ಇಲ್ಲದಿರುವುದು ಕಂಡುಬಂದಿದೆ.
ಕಲ್ಬೇಲ ವರದಿಯ ಪ್ರಕಾರ ಶೇಕ್ ಹಸೀನಾ ಅವರು ಬಾಂಗ್ಲಾದೇಶದಿಂದ ನಿರ್ಗಮಿಸಿದ ನಂತರ ಹಲವಾರು ಸ್ಥಳಗಳಲ್ಲಿ ಜನರು ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಗಳನ್ನು ದ್ವಂಸಗೊಳಿಸುವುದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಈ ವರದಿಯಲ್ಲಿ ಬೆಂಕಿಯಲ್ಲಿ ಸುಡುತ್ತಿರುವ ಕಟ್ಟಡದ ಕುರಿತು ಸತ್ಖಿರಾದಲ್ಲಿನ ವಿವಿಧ ಸ್ಥಳಗಳಲ್ಲಿನ ದಾಳಿಯ ಚಿತ್ರ ಎಂದು ಅಡಿಬರಹವನ್ನು ನೀಡಲಾಗಿದೆ.
ಈ ಶೀರ್ಷಿಕೆಯನ್ನು ಆಧಾರಿಸಿ ಕೀ ವರ್ಡ್ಗಳನ್ನು ಬಳಸಿ ಗೂಗಲ್ ಸರ್ಚ್ ನಡೆಸಿದಾಗ, ಏಳು ತಿಂಗಳ ಹಿಂದೆ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ ಹಲವಾರು ವಿಡಿಯೋಗಳು ಲಭ್ಯವಾಗಿದ್ದು, ಅದೇ ಕಟ್ಟಡಗಳನ್ನು ಹೋಲುವ ವಿಡಿಯೋಗಳು ಕಂಡುಬಂದಿವೆ. ಆ ವಿಡಿಯೋಗಳಲ್ಲಿ ರಾಜ್ ಪ್ರಸಾದ್ ರೆಸ್ಟೋರೆಂಟ್ ಕಲಾರೋವಾ ಸತ್ಖಿರಾ ಎಂದು ಬರೆಯಲಾಗಿತ್ತು. ಮತ್ತೊಂದು ವಿಡಿಯೋದಲ್ಲಿ “ನೂರು ಕೋಟಿ ವೆಚ್ಚದ ಅರಮನೆಯನ್ನು ನಿರ್ಮಿಸಲಾಗಿದೆ, ಇದರ ಮಾಲಿಕ ರಾಜ್ ಪ್ರಸಾದ್” ಎಂದು ಬರೆಯಲಾಗಿತ್ತು. ಈ ಅಂಶಗಳು ವೈರಲ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಕಟ್ಟಡ ಹಿಂದೂ ದೇವಾಲಯವಲ್ಲ ಬದಲಿಗೆ ಅದೊಂದು ರೆಸ್ಟೋರೆಂಟ್ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಗಲಭೆಯಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋ ಹೋಟೆಲ್ ಒಂದರ ಚಿತ್ರವಾಗಿದ್ದು, ಆ ಮೂಲಕ ಸುಳ್ಳು ಸುದ್ದಿ ಹಾಗೂ ಕೋಮು ದ್ವೇಷವನ್ನು ಬಿತ್ತಲು ಪ್ರಯತ್ನಿಸಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯ ಕೈ-ಕಾಲು ಕಟ್ಟಿ ಕಿರುಕುಳ ನೀಡಲಾಗುತ್ತಿದೆಯೇ?