ಮಂಡ್ಯ ಜನರಿಗೆ ಮೋಸ ಮಾಡಿದ್ರಾ ಮಾಜಿ ಸಿ.ಎಂ.ಕುಮಾರಸ್ವಾಮಿ….?
ಮಂಡ್ಯ ಜನರಿಗೆ ಮೋಸ ಮಾಡಿದ್ರಾ ಮಾಜಿ ಸಿ.ಎಂ.ಕುಮಾರಸ್ವಾಮಿ? ಮಂಡ್ಯ ಜಿಲ್ಲೆಗೆ ೮೫೦೦ ಕೋಟಿ ಕೊಟ್ಟಿದ್ದು ಚುನಾವಣಾ ಗಿಮಿಕ್ಕಾ? ಹೌದು ಎನ್ನುತ್ತಿವೆ ೨೦೧೯-೨೦ ಬಜೆಟ್ ದಾಖಲೆ ಪ್ರತಿಗಳು.
೨೦೧೯-೨೦ ಮಂಡಿಸಿದ ಬಜೆಟ್ ನಲ್ಲಿ ಮಂಡ್ಯ ನಗರದ ರಸ್ತೆ ಅಭಿವೃದ್ದಿಗೆ ೫೦ ಕೋಟಿ ಮತ್ತು ಮೈಷುಗರ್ ಸಕ್ಕರೆ ಕಾರ್ಖಾನೆಗೆ ೧೦೦ ಕೋಟಿ ಅನುದಾನ ಮಾತ್ರ ಉಲ್ಲೇಖವಾಗಿದೆ. ಆ ಮೀಸಲಿಟ್ಟ ಹಣ ಕೂಡ ಬಿಡುಗಡೆ ಕೂಡ ಆಗದೆ ಮಂಡ್ಯ ಜಿಲ್ಲೆಗೆ ಅನ್ಯಾಯವಾಗಿದೆ. ಜಿಲ್ಲೆಗೆ ಬಿಡುಗಡೆ ಮಾಡಿದ್ದೆನ್ನೆನ್ನುವ ಅನುದಾನದ ಕಾಮಗಾರಿ ದಾಖಲೆ ತೋರಿಸಲಿ ಎಂದು ಕೈ ನಾಯಕ ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.
ಮಗ ನಿಖಿಲ್ ಚುನಾವಣೆಗೆ ನಿಂತಾಗ ಜಿಲ್ಲೆಗೆ ೮,೫೦೦ಕೋಟಿ ಅಭಿವೃಧ್ಧಿ ಯೋಜನೆ ಕೊಟ್ಟಿದ್ದೇನೆಂದಿರುವ ಕುಮಾರಸ್ವಾಮಿ ಹೇಳಿಕೆ ಸದ್ಯ ಭಾರೀ ಅನುಮಾನಗಳಿಗೆ ಎಡೆ ಮಾಡಿದೆ.