ಮನೆ ಹೆಣ್ಮಕ್ಕಳನ್ನ ಅನುಮಾನಿಸುವ ಕೆಟ್ಟ ಕಾಯಿಲೆ ಕಾಂಗ್ರೆಸ್ ಗೆ ಬಾರದಿರಲಿ – ಸಿಟಿ ರವಿ
ಇವಿಎಂ ದೋಷದಿಂದ ಅನರ್ಹರು ಮತ್ತೇ ಆಯ್ಕೆಯಾಗಿದ್ದಾರೆಂದು ಶಾಸಕ ಅಮರೇಗೌಡ ಬಯ್ಯಾಪೂರ ಅನುಮಾನ ಪಟ್ಟಿದ್ದಕ್ಕ ಕೊಪ್ಪಳದಲ್ಲಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ ನಾಲಿಗೆ ಹರಿಬಿಟ್ಟಿದ್ದಾರೆ.
ಇವಿಎಂ ದೋಷದಿಂದ ಅನರ್ಹರು ಮತ್ತೇ ಆಯ್ಕೆಯಾಗಿದ್ದಾರೆಂದು ಶಾಸಕ ಅಮರೇಗೌಡರ ಮಾತಿಗೆ ಕೊಪ್ಪಳದ ಆನೆಗೊಂದಿ ಉತ್ಸವದಲ್ಲಿ ಪ್ರತಿಕ್ರಿಯಿಸಿದ ಸಚಿವ ಸಿಟಿ ರವಿ, ಕಾಂಗ್ರೆಸ್ಸಿಗರು ಹೆಂಡತಿ, ತಾಯಿ ಯನ್ನು ಮಾತ್ರ ಅನುಮಾನಿಸಿಲ್ಲ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಗೆ ಸಚಿವ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.
ತಾಯಿ, ಹೆಂಡತಿಯನ್ನೂ ಅನುಮಾನಿಸುವ ಕೆಟ್ಟ ಕಾಯಿಲೆ ಕಾಂಗ್ರೆಸ್ ಗೆ ಬಾರದಿರಲಿ ಎಂದ ಸಚಿವರ ರವಿ ಕಟೂವಾಗಿ ನುಡಿದಿದ್ದಾರೆ. ಅಮರೇಗೌಡ ಗೆದ್ದಿದ್ದು ಕೂಡ ಇವಿಎಂನಿಂದಲೇ. ಕಾಂಗ್ರೆಸ್ ಗೆ ಎಲ್ಲದಕ್ಕೂ ಅನುಮಾನ ಪಡುವ ಕಾಯಿಲೆ ಅಂಟಿದೆ. ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ಅನುಮಾನ. ಚುನಾವಣೆ ಸೋತರೆ ಇವಿಎಂ ಮೇಲೆ ಅನುಮಾನ ಎಂದು ಸಚಿವ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.