ಯಾವ ಪಕ್ಷದವರೂ ನಮ್ಮೂರಿನ ಒಳಗಡೆ ಬರಬಾರದು : ಪ್ರವಾಹ ಸಂತ್ರಸ್ತರಿಂದ ಚಚುನಾವಣೆ ಬಹಿಷ್ಕಾರ
ಯಾವ ಪಕ್ಷದವರೂ ನಮ್ಮೂರಿನ ಒಳಗಡೆ ಬರಬಾರದು ಎಂದು ಅಥಣಿಯ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರು ಎಚ್ಚರಿಕೆ ಕೊಟ್ಟಿದ್ದಾರೆ.
ಹೌದು… ಮೂಲಭೂತ ಸೌಕರ್ಯ್ಯಗಳಿಂದ ವಂಚಿತರಾದ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರು ಚಚುನಾವಣೆ ಬಹಿಷ್ಕಾರ ಹಾಕಿದ್ದಾರೆ. ಪರಿಹಾರ ಕೊಡಿ, ಇಲ್ಲ ಚುನಾವಣೆ ಬಹಿಷ್ಕಾರ ಎದುರಿಸಿ ಎಂದು ಬೆಳಗಾವಿ ಜಿಲ್ಲೆಯ ಅಥಣಿಯ ಮೂರು ಗ್ರಾಮಗಳ ಮತದಾರರು ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ನ.30 ರೊಳಗೆ ಬೆಳೆ, ಮನೆ ಪರಿಹಾರ ರೈತರ ಅಕೌಂಟಿಗೆ ಸೇರಬೇಕು ಎಂದು ಹುಲಗಬಾಳಿ, ರಾಮವಾಡಿ, ಕರ್ಲಟ್ಟಿ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.