ಅಥಣಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಜಿ. ಪಂ ಸದಸ್ಯ ಶೆಡ್ ನಲ್ಲಿ ಲಾಕ್ …!
ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಜಿ. ಪಂ ಸದಸ್ಯರನ್ನು ಶೆಡ್ ನಲ್ಲಿ ಲಾಕ್ ಮಾಡಿದ ಘಟನೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಜಿ. ಪಂ. ಸದಸ್ಯ ಸಿದ್ದಪ್ಪ ಮುದಕನ್ನವರ ಗೆ ತಗಡಿನ ಶೆಡ್ ನಲ್ಲಿ ಲಾಕ್ ಮಾಡಿ ಪ್ರವಾಹ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದಿಂದ ಸರಿಯಾಗಿ ಪರಿಹಾರ ಸಿಗದ ಕಾರಣ ಆಕ್ರೋಶಗೊಂಡಿರುವ ಗ್ರಾಮಸ್ಥರು, ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಪ್ರಚಾರಕ್ಕೆ ತೆರಳಿದ್ದ ಜಿ. ಪಂ. ಸದಸ್ಯ ಸಿದ್ದಪ್ಪ ಮುದಕನ್ನವರನ್ನು ಶೆಡ್ ನೊಳಗೆ ಕೂಡಿ ಹಾಕಿದರು.
ಗ್ರಾಮಸ್ಥರ ಮನವೊಲಿಸಲು ಸಿದ್ದಪ್ಪ ಮುದಕನ್ನವರ ಶೆಡ್ ನಲ್ಲಿ ಕುಳಿತೇ ತಹಶೀಲ್ದಾರ್ ಗೆ ಸಮಸ್ಯೆ ಬಗೆ ಹರಿಸುವಂತೆ ಕರೆ ಮಾಡಿದರು. ಅಥಣಿಯ ಕೃಷ್ಣಾ ತೀರದಲ್ಲಿ ಸಂತ್ರಸ್ತರ ಆಕ್ರೋಶದ ವಿಡಿಯೋ ಸದ್ಯ ವೈರಲ್ ಆಗಿದೆ.