ಅನಾಥ ವ್ಯಕ್ತಿಗೆ ಕಟ್ಟಿಂಗ್ ಶೇವಿಂಗ್ ಮಾಡಿ ಹೊಸಬಟ್ಟೆ ಕೊಡಿಸಿ ಯುವಕರ ಮಾನವೀಯತೆ….
ಅನಾಥ ವ್ಯಕ್ತಿಗೆ ಕಟ್ಟಿಂಗ್ ಶೇವಿಂಗ್ ಮಾಡಿ ಹೊಸಬಟ್ಟೆ ಕೊಡಿಸಿ ಯುವಕರು ಮಾನವೀಯತೆ ಮೆರೆದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದಲ್ಲಿ ಕಳೆದ ಆರೇಳು ತಿಂಗಳಿಂದ ಪಟ್ಟಣದ ಸುತ್ತಮುತ್ತಾ ಓಡಾಡುತ್ತಿದ್ದ ವ್ಯಕ್ತಿ ತಲೆಕೂದಲು, ಗಡ್ಡಬಿಟ್ಟು, ಕಟಿಂಗ್ ಸೇವಿಂಗ್ ಮಾಡಿಸಲಾಗದೆ ಭಿಕ್ಷೆ ಬೇಡಿ ತಿನ್ನುತ್ತಿದ್ದ. ಅನಾಥ ವ್ಯಕ್ತಿ ಸಹಾಯ ಮಾಡಲು ನಿರ್ಧರಿಸಿದ ಪಟ್ಟಣದ ಯುವಕ ಆದರ್ಶ ರಾತ್ರಿ ತನ್ನ ಸ್ನೇಹಿತರ ತಂಡದೊಂದಿಗೆ ಅನಾಥ ವ್ಯಕ್ತಿಯನ್ನು ಕರೆ ತಂದು ತಾವೇ ವ್ಯಕ್ತಿಗೆ ಕಟಿಂಗ್ ಶೇವಿಂಗ್ ಮಾಡಿದ್ದಾರೆ. ಸ್ನಾನ ಮಾಡದೆ ಇದ್ದ ವ್ಯಕ್ತಿಗೆ ಸ್ನಾನ ಮಾಡಿ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಅನಾಥ ವ್ಯಕ್ತಿ ಹೋಟೇಲ್ ನಲ್ಲಿ ಕೆಲಸ ಕೊಡಿಸಲು ಮುಂದಾಗಿರೋ ಯುವಕರ ಮಾನವೀಯತೆಯ ಮಾದರಿ ಕೆಲಸಕ್ಕೆ ಪಟ್ಟಣದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದು, ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಿಸಿದ ಯುವಕರಿಗೆ ಅನಾಥ ವ್ಯಕ್ತಿ ಕೈ ಮುಗಿದು ವಂದಿಸಿದ್ದಾನೆ.