ಆಸ್ತಿ ಹಕ್ಕು ಬದಲಾವಣೆಗೆ ಲಂಚ ಸ್ವೀಕರಿಸೋ ವೇಳೆ ಎಸಿಬಿ ಬಲೆಗೆ ಬಿದ್ದ ಬಿಲ್ ಕಲೆಕ್ಟರ್….

ಆಸ್ತಿ ಹಕ್ಕು ಬದಲಾವಣೆಗೆ ಲಂಚ ಸ್ವೀಕರಿಸೋ ವೇಳೆ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ  ಫಕೀರಬೂದಿಹಾಳ  ಗ್ರಾಮಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ. ಈರಪ್ಪ ಮೇಟಿ, ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್.

ಹೌದು.. ಈತ ನರೇನೂರ ಗ್ರಾಮದ ಮಾರುತಿ ಲಮಾಣಿ ಎಂಬುವವರಿಂದ ೧೦ ಸಾವಿರ ಲಂಚ ಕೇಳಿದ್ದ. ಮೊದಲು 3 ಸಾವಿರ ಸ್ವೀಕರಿಸಿ, ಉಳಿದ  7 ಸಾವಿರ ಲಂಚ ಸ್ವೀಕರಿಸೋ ವೇಳೆ  ಎಸಿಬಿ ಬಲೆಗೆ ಬಿದ್ದಿದ್ದಾನೆ. ಮಾರುತಿ ಲಮಾಣಿ ಎಂಬುವವರು ಈರಪ್ಪ ಮೇಟಿ ಲಂಚದ ವಿಚಾರ ಎಸಿಬಿಗೆ ದೂರು ನಿಡಿದ್ದರು. ದೂರನ್ನು ಆಧರಿಸಿ ಎಸಿಬಿ DYSP  ಎಂ.ವಿ.ಮಲ್ಲಾಪೂರ, ಸಿಪಿಐಗಳಾದ ರಾಘವೇಂದ್ರ ಹಳ್ಳೂರ, ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ದಾಳಿ ನಡೆಸಿದೆ.

ಈ ವೇಳೆ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights