ಈರುಳ್ಳಿ ರಫ್ತು ನಿಷೇಧ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಈರುಳ್ಳಿ ಬೆಳೆಗಾರರ ಆಕ್ರೋಶ…!
ಕೇಂದ್ರ ಸರ್ಕಾರದ ವಿರುದ್ಧ ಈರುಳ್ಳಿ ಬೆಳೆಗಾರರು ಆಕ್ರೋಶ ಹೊರಹಾಕಿದ ಘಟನೆ ದಾವಣಗೆರೆ ಹರಪನಹಳ್ಳಿಯಲ್ಲಿ ನಡೆದಿದೆ.
ಈರುಳ್ಳಿ ರಫ್ತು ನಿಷೇಧ ಖಂಡಿಸಿ ರಸ್ತೆ ತಡೆದು ಈರುಳ್ಳಿ ಬೆಳೆಗಾರರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದಿಂದ ರಸ್ತೆ ತಡೆ ಮಾಡಿ, ಪಟ್ಟಣದ ಇಜಾರಿ ಶಿರಸಪ್ಪ ವೃತ್ತದಿಂದ ಮೆರವಣಿಗೆ ಮಾಡಿದರು.
ಕೇಂದ್ರ ಸರ್ಕಾರದ ಅಣುಕು ಬೆದರು ಗೊಂಬೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಈರುಳ್ಳಿ ಬೆಳೆಗಾರರು, ಕೇಂದ್ರ ಸರ್ಕಾರ ಈರುಳ್ಳಿ ಬೆಳೆಗೆ ರಫ್ತು ನಿಷೇಧ ಕೈಬಿಡಬೇಕೆಂದು ಒತ್ತಾಯ ಮಾಡಿದ್ದಾರೆ.