ಉಪಚುನಾವಣೆಯಲ್ಲಿ ತನ್ವೀರ್ ಸೇಠ್ ಕೊರತೆ – ಮಾಜಿ ಸಚಿವ ಯು.ಟಿ.ಖಾದರ್
ಕರ್ನಾಟಕದ ಉಪಚುನಾವಣೆಯನ್ನ ದೇಶವೆ ನೋಡುತ್ತಿದೆ. ಸುಪ್ರೀಂಕೋರ್ಟ್ 17 ಜನರನ್ನ ನೀವು ಶಾಸಕರಾಗಲು ಅರ್ಹರಲ್ಲ ಅಂತ ಹೇಳಿ ಜನರ ಮುಂದೆ ಕಳುಹಿಸಿದ್ದಾರೆ. ಇದೀಗಾ ರಾಜ್ಯದ ಮತದಾರ ಮರ್ಯಾದೆ ದೇಶದಲ್ಲಿ ಉಳಿಸಬೇಕಿದೆ.
ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವ ವಿಶ್ವಾಸವಿದೆ. ಚುನಾವಣೆಯಲ್ಲಿ ತನ್ವೀರ್ ಸೇಠ್ ಕೊರತೆ ಕಾಣುತ್ತಿದೆ. ಆದ್ರು ಅವರ ಸಲಹೆ ಪಡೆದು ಬೆಂಬಲಿಗರೊಂದಿಗೆ ಸಾಮೂಹಿಕ ಪ್ರಚಾರ ನಡೆಸುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಯುಟಿ.ಖಾದರ್, ಸರ್ವ ಧರ್ಮಿಯರ ಪ್ರಾರ್ಥನೆಯಿಂದ ಅವರು ಚೇತರಿಸಿಕೊಂಡಿದ್ದಾರೆ. ಶೀಘ್ರ ಸಂಪೂರ್ಣ ಗುಣಮುಖರಾಗಲು ದೇವರಲ್ಲಿ ಪ್ರಾರ್ಥಿಸುವೆ.
ಶಾಸಕ ತನ್ವೀರ್ಸೇಠ್ ಕೊಲೆಯತ್ನದಲ್ಲಿ ಎಸ್ಡಿಪಿಐ ಸಂಘಟನೆ ಕೈವಾಡ ಶಂಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯುಟಿ.ಖಾದರ್ ಇದನ್ನು ಸರ್ಕಾರ ಆಧಾರ ಸಮೇತ ಸಾಭೀತು ಪಡಿಸಬೇಕು. ಯಾರೇ ವ್ಯಕ್ತಿ ಅಥವಾ ಸಂಘಟನೆ ಹಿಂಸಾತ್ಮಕ ಕೃತ್ಯ ಮಾಡೋದು ಸರಿಯಲ್ಲ. ಒಂದು ವೇಳೆ ಸಂಘಟನೆ ಭಾಗಿ ಬಗ್ಗೆ ಸಾಭೀತಾದರೆ ಸರ್ಕಾರವೇ ಕ್ರಮ ವಹಿಸಲಿ. ಅದರಲ್ಲಿ ನಾನು ಹೇಳುವುದು ಏನೂ ಇಲ್ಲ ಎಂದರು.