ಎದೆಯಲ್ಲಿ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರು….!
ಎದೆಯಲ್ಲಿ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಗುರಮಿಠಕಲ್ ಬಳಿ ಅಪಘಾತದಲ್ಲಿ ವಿಜಯವಾಡ ಮೂಲದ ಲಾರಿ ಚಾಲಕ ವೆಂಕಟೇಶ್ವರ ರಾವ್ ಎಂಬುವವರ ದೇಹದೊಳಗೆ ರಾಡ್ ಹೊಕ್ಕಿದೆ. ಲಾರಿ ಅಪಘಾತದಲ್ಲಿ ಎದೆಯೊಳಗೆ ನುಗ್ಗಿ ಹೊರಬಂದ ಸರಳನ್ನು ಸತತ ಒಂದುವರೆ ಗಂಟೆ ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಸರಳು ಹೊರ ತೆಗೆದಿದ್ದಾರೆ. ಜನರಲ್ ಸರ್ಜನ್ ಡಾ.ರಾಥೋಡ್ ನೇತೃತ್ವದ ವೈದ್ಯರ ತಂಡದಿಂದ ಮಧ್ಯರಾತ್ರಿ ಶಸ್ತ್ರಚಿಕಿತ್ಸೆ ಮಾಡಿ ಕರ್ತವ್ಯ ಮೆರೆದಿದ್ದಾರೆ.
ಸದ್ಯ ಲಾರಿ ಚಾಲಕ ಕೋಟೇಶ್ವರ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.