ಸಿಎಂಗೆ ತಲುಪವವರೆಗೂ ವಿಡಿಯೋ ಶೇರ್ ಮಾಡಿ ಎಂದು ಕಬ್ಬು ನಾಶ ಮಾಡಿದ ರೈತ!

ಮುಖ್ಯಮಂತ್ರಿ ಬಿಎಸ್‌.ಯಡಿಯೂರಪ್ಪ ಅವರಿಗೆ ತಲುಪವವರೆಗೂ ವಿಡಿಯೋ ಶೇರ್ ಮಾಡಿ ಎಂದು ರೈತನೊಬ್ಬ ಒಂದೂವರೆ ಎಕರೆ ಕಬ್ಬು ನಾಶ ಮಾಡಿದ್ದಾನೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಬಿಳ್ತಿ ಗ್ರಾಮದ ದಿನೇಶ್‌ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲಾಗದೆ ಒಂದೂವರೆ ಎಕರೆ ಕಬ್ಬು ನಾಶ ಮಾಡಿದ ರೈತ. ಸುಮಾರು 1 ವರ್ಷ 8 ತಿಂಗಳು ಬೆಳೆದಿದ್ದ ಕಬ್ಬನ್ನು ಟ್ರ್ಯಾಕ್ಟರ್‌ನಲ್ಲಿ ಉತ್ತು ನಾಶ ಮಾಡಿದ್ದಾನೆ.

ಸಾಲ ಮಾಡಿ ಕಬ್ಬು ಬೆಳೆದಿದ್ದ ದಿನೇಶ್, ಕಬ್ಬನ್ನು ನಾಶ ಮಾಡಲು ಟ್ರ್ಯಾಕ್ಟರ್‌ಗೆ ಸುಮಾರು 20 ಸಾವಿರ ಖರ್ಚು ಮಾಡಿದ್ದಾನೆ.

ಸಕ್ಕರೆ ಕಾರ್ಖಾನೆಗೆ ಸಕಾಲಕ್ಕೆ ಕಬ್ಬು ಸಾಗಿಸಲು ಸಾಧ್ಯವಾಗದ ದಿನೇಶ್, ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಲಂಚ ನೀಡಿದರೂ ಕಬ್ಬು ಕಟಾವು ಮಾಡಲು ಸಾಧ್ಯ ಆಗಿಲ್ಲ ಎಂದು ಫೇಸ್‌ಬುಕ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.

ಫೇಸ್‌ಬುಕ್ ಪೇಜ್‌ನಲ್ಲಿ ಕಬ್ಬನ್ನು ನಾಶ ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲುಪುವವರೆಗೂ ಶೇರ್ ಮಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights