ಕರುನಾಡಿಗೆ ಮುಂಬೈ ಲಿಂಕ್ ಟೆನ್ಶನ್ : ರಾಜ್ಯದಲ್ಲಿಂದು 127 ಹೊಸ ಕೊರೊನಾ ಕೇಸ್ ಪತ್ತೆ..!
ಕರುನಾಡಿಗೆ ಇಂದು ಮುಂಬೈ ಕಂಟಕ ಶುರುವಾಗಿದ್ದು ರಾಜ್ಯದಲ್ಲಿಂದು ಹೊಸದಾಗಿ 127 ಕೊರೊನಾ ಕೇಸ್ ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1373 ಕ್ಕೇರಿಕೆಯಾಗಿದೆ.
ಹೌದು…. ದಿನ ಕಳೆದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನೂರಕ್ಕೂ ಅಧಿಕ ಜನ ಹೊಸದಾಗಿ ದಾಖಲಾಗಿದ್ದಾರೆ. ಇದಕ್ಕೆ ಮೂಲ ಮುಂಬೈನಿಂದ ಬಂದವರೇ ಆಗಿದ್ದು, ಮುಂಬೈನಿಂದ ಬಂದವರಲ್ಲಿ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ. ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದ ವೇಳೆಗೆ ಅರ್ಧ ದಿನಕ್ಕೆ ಹೊಸದಾಗಿ 127 ಕೊರೊನಾ ಕೇಸ್ ದಾಖಲಾಗಿದ್ದು ಕರ್ನಾಟಕದಲ್ಲಿ ಇದೇ ಮೊದಲು.
ಇವರಲ್ಲಿ 62 ಮಂದಿಗೆ ಸೋಂಕು ಮುಂಬೈ ನಿಂದ ಬಂದವರಾಗಿದ್ದು, ರಾಜ್ಯಕ್ಕೆ ಮುಂಬೈ ಲಿಂಕ್ ಟೆನ್ಶನ್ ಶುರುವಾಗಿದೆ. ಇವರಲ್ಲಿ ಶಿವಮೊಗ್ಗ 5 ಜನ, ಕಬುರಗಿಯಲ್ಲಿ 11 ಜನ, ದಾವಣಗೆರೆಯಲ್ಲಿ 19 ಜನ, ಗದಗ1, ಉಡುಪಿ 4, ಚಿಕ್ಕಮಗಳೂರು 2, ಬೆಂಗಳೂರು6, ಮಂಡ್ಯ 62, ಯಾದಗಿರಿ, ಚಿತ್ರದುರ್ಗ, ವಿಜಯಪುರ ತಲಾ 1, ಉತ್ತರ ಕನ್ನಡ-4 ಕೊರೊನಾ ಕೇಸ್ ದಾಖಲಾಗಿವೆ. ಇದರಲ್ಲಿ ಮಂಡ್ಯದಲ್ಲೇ ದಿಢೀರನೇ 62 ಕೇಸ್ ದಾಖಲಾಗಿದ್ದು, ಇವರು ಮುಂಬೈನಿಂದ ಬಂದವರು ಎಂದವರು ಎಂದು ಹೇಳಲಾಗುತ್ತಿದೆ. ಜೊತೆಗೆ ಉಡಪಿಯಲ್ಲೂ ಮಹಾರಾಷ್ಟ್ರದಿಂದ ಬಂದವರಿಗೇ ಕೊರೊನಾ ಪಾಸಿಟಿವ್ ದಾಖಲಾಗಿದೆ.
ಈ ವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1373 ದಾಖಲಾಗಿದ್ದು, ಇವರಲ್ಲಿ 40 ಜನ ಸಾವನ್ನಪ್ಪಿದ್ದಾರೆ.