ಕಾಡುಕುರಿ ನುಂಗಿ ಮಲಗಿದ್ದ ಬೃಹತ್ ಹೆಬ್ಬಾವು ಸೆರೆ…!
ಕಾಡುಕುರಿ ನುಂಗಿ ಮಲಗಿದ್ದ ಬೃಹತ್ ಹೆಬ್ಬಾವು ಸೆರೆಯಾದ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ವಗಳೆ ನಾಗರಾಜ್ ಕಾಫಿ ತೋಟದಲ್ಲಿ ನಡೆದಿದೆ.
ಹೌದು… ಕೊಪ್ಪ ತಾಲೂಕಿನ ವಗಳೆ ನಾಗರಾಜ್ ಕಾಫಿ ತೋಟದಲ್ಲಿ ಸುಮಾರು 75 ಕೆ.ಜಿ. ತೂಕವಿದ್ದ ಹೆಬ್ಬಾವನ್ನ ಕಂಡು ಮಲೆನಾಡಿಗರು ಬೆಚ್ಚಿ ಬಿದ್ದಿದ್ದಾರೆ. ಉರಗ ತಜ್ಞ ಹರೀಂದ್ರಾರಿಂದ ಮತ್ತು ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಒಂದು ಗಂಟೆ ಕಾರ್ಯಾಚರಣೆ ಬಳಿಕ ಕಾಡುಕುರಿ ತಿಂದ ಬೃಹತ್ ಹೆಬ್ಬಾವು ಸೆರೆಯಾಗಿದೆ. ಸೆರೆ ಹಿಡಿದ ಹೆಬ್ಬಾವನ್ನ ಅರಣ್ಯಕ್ಕೆ ಬಿಡಲಾಗಿದೆ.