ಕುರಿ ಕಳ್ಳನಿಗೆ ಕೊಡಲಿ ಎಟು ಪ್ರಕರಣ : ಕುರಿಗಾಯಿಯ ಹಾಡಿನ ಸೇಲ್ಫಿ ವಿಡಿಯೋ ವೈರಲ್

ದಾವಣಗೆರೆಯಲ್ಲಿ ಕುರಿ ಕಳ್ಳನಿಗೆ ಕೊಡಲಿ ಎಟು ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ ಕುರಿಗಳ್ಳನ ಪ್ರಕರಣ ಹಾಡಿನ ಮೂಲಕ ಹೊರಹೊಮ್ಮಿದೆ.

ಹೌದು… ಕುರಿಕಳ್ಳ ಚಮನ್ ಸಾಬ್ ಎಂಬ ವ್ಯಕ್ತಿಯ ರುಂಡ ಕತ್ತರಿಸಿ ಕೊಲೆ ಮಾಡಿದ್ದ ಕುರಿಗಾಯಿ ಅರ್ಜುನಪ್ಪನ ಕುರಿತು ಹಾಡು ಕಟ್ಟಿ ಹಾಡಿದ್ದಾರೆ ಮತ್ತೊಬ್ಬ ಕುರಿಗಾಯಿ. ಜಾನಪದ ಸೊಗಡಿನ ಶೈಲಿಯಲ್ಲಿ ಕುರಿಗಾಯಿ ಹಾಡಿರುವ ವಿಡಿಯೋ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೇಬೆನ್ನೂರ ಬಳಿಯ ಮುಗಿನಗೊಂದಿ ಗ್ರಾಮದ ಜಮೀನಿನಲ್ಲಿ ಸೆಪ್ಟೆಂಬರ್ ೨೨ ರಂದು ನಡೆದ ಘಟನೆ.ಕುರಿಕಳ್ಳತನಕ್ಕೆಬಂದಿದ್ದನ್ನ ಕುರಿಗಾಹಿ ಚಮನಸಾಬ್ ಮೇಲೆ ಕೊಡಲಿ ಬಿಸಲಾಗಿತ್ತು. ತಲೆಗೆ ಕೊಡಲಿ ಬಡಿದು ಚಮನಸಾಬ್ ಸಾವನ್ನಪ್ಪಿದ್ದ. ಚಮನ್ ಸಾಬ್ ವಿರುದ್ದ ಹತ್ತು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ‌ಕೇಸ್ ದಾಖಲಾಗಿತ್ತು. ಕೊಲೆ ಮಾಡಿದ ಕುರಿಗಾಹಿ ಅರ್ಜುನಪ್ಪ ಪೋಲಿಸ್ ಠಾಣೆಗೆ ಬಂದು ಶರಣಾಗಿದ್ದ.

ಕುರಿಕಳ್ಳರಿಗೆ ಎಚ್ಚರಿಕೆ ಸಂದೇಶದ ಬಗ್ಗೆ ಹಾಡಿನಲ್ಲಿ ಉಲ್ಲೇಖ ಮಾಡಲಾಗಿದ್ದು, ಕುರಿಗಾಯಿಯ ಹಾಡಿನ ಸೇಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights