ಕೊನೆಗೂ ಮುಕ್ತಾಯಗೊಂಡ ಖಾತೆ ಖ್ಯಾತೆ : ಯಾರಿಗೆ ಯಾವ ಖಾತೆ…?
ಬಿಎಸ್ವೈ ಸಿದ್ಧಮಾಡಿಕೊಂಡಿದ್ದ 17 ಅನುಭವಿ ತಲೆಗಳಿಗೆ ಇದೀಗ ಖಾತೆ ಹಂಚಿಕೆ ಮಾಡಲಾಗಿದೆ. ಹಾಗಾದರೆ ಯಾರಿಗೆ ಯಾವ ಖಾತೆ ನೀಡಲಾಗುತ್ತದೆ ಎನ್ನುವುದು ಸಹ ಅಷ್ಟೇ ಮುಖ್ಯ.
ಬಿಜೆಪಿಯ ಹಿರಿಯರಾದ ಜಗದೀಶ ಶೆಟ್ಟರ್, ಕೆ. ಎಸ್. ಈಶ್ವರಪ್ಪ, ಮಾಧುಸ್ವಾಮಿ, ಆರ್. ಅಶೋಕ್ ಜತೆಗೆ ಪಕ್ಷೇತರ ನಾಗೇಶ್ ಸೇರಿ ಒಟ್ಟು 17 ಮಂದಿ ಕರ್ನಾಟಕದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನೊಂದು ದಿನದ ಅವಧಿಯಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆ ಅನ್ವಯ ಸಚಿವಗಿರಿ ನೀಡುವ ಸಾಧ್ಯತೆ ಇದೆ.
ಸಚಿವರಿಗೆ ಹಂಚಿಕೆಯಾದ ಖಾತೆ
- ಗೋವಿಂದ ಕಾರಜೋಳ- ಲೋಕೋಪಯೋಗಿ ಖಾತೆ
- ಅಶ್ವತ್ಥ್ ನಾರಾಯಣ- ಐಟಿಬಿಟಿ ಮತ್ತು ಉನ್ನತ ಶಿಕ್ಷಣ ಖಾತೆ
- ಲಕ್ಷ್ಮಣ್ ಸವದಿ- ಸಾರಿಗೆ
- ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ
- ಆರ್.ಅಶೋಕ್-ಕಂದಾಯ
- ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯ ಕೈಗಾರಿಕೆ
- ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ವಿ.ಸೋಮಣ್ಣ- ವಸತಿ ಖಾತೆ
- ಸಿ.ಟಿ.ರವಿ- ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ
- ಬಸವರಾಜ ಬೊಮ್ಮಾಯಿ- ಗೃಹ ಖಾತೆ
- ಕೋಟಾ ಶ್ರೀನಿವಾಸ್ ಪೂಜಾರಿ- ಮೀನುಗಾರಿಕೆ, ಸಾರಿಗೆ
- ಮಾಧುಸ್ವಾಮಿ- ಕಾನೂನು ಮತ್ತು ಸಣ್ಣ ನೀರಾವರಿ
- ಸಿ.ಸಿ.ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ
- ಎಚ್.ನಾಗೇಶ್- ಅಬಕಾರಿ
- ಪ್ರಭು ಚವ್ಹಾಣ್- ಪಶುಸಂಗೋಪನೆ
- ಶಶಿಕಲಾ ಜೊಲ್ಲೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ