ಕೋರ್ಟ್ ತೀರ್ಪಿನ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಭೇಟಿ : ಏನಿರಬಹುದು ಇದರ ಉದ್ದೇಶ..?
ನೆನ್ನೆ ಅನರ್ಹ ಶಾಸಕರಿಗೆ ಸುಪ್ರೀಕೋರ್ಟ್ ತೀರ್ಪು ನೀಡುತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ಹೊಸ ಬದಲಾವಣೆಗಳು ನಡೆದಿವೆ.
ಹೌದು.. ಕೋರ್ಟ್ ತೀರ್ಪಿನ ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ಕೊಟ್ಟಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮೈತ್ರಿ ಸರ್ಕಾರದ ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ. ಹೀಗಾಗಿ ಪ್ರತೀ ಬಾಋಇ ರಮೇಶ್ ಜಾರಕಿಹೊಳಿಗೆ ಕಾಳೆಯುತ್ತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಉದ್ದೇಶಕ್ಕೆ ಸಿಎಂ ಭೇಟಿ ಮಾಡಿರಬಹುದು ಎನ್ನುವ ಅನುಮಾನ ಶುರುವಾಗಿದೆ.
ಆದರೆ ಈ ಬಗ್ಗೆ ಲಕ್ಷ್ಮ ಹೆಬ್ಬಾಳ್ಕರ್ ಮಾತ್ರ ತಾವು ಕ್ಷೇತ್ರದ ಕೆಲಸಕ್ಕಾಗಿ ಸಿಎಂ ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ.
ಭೇಟಿ ಮೂಲಕ ನೀವು ಪಕ್ಷ ಬಿಟ್ಟು ಅನರ್ಹರಾಗಿ ಬಿಜೆಪಿ ಸೇರಿದರೂ ಸಿಎಂ ಹಾಗೂ ನನ್ನ ಬಾಂಧವ್ಯ ಹೇಗಿದೆ ಅಂತ ತೋರಿಸಿಕೊಳ್ಳುವ ಪ್ರಯತ್ನ ಎನ್ನಲಾಗುತ್ತಿದೆ. ಅಲ್ಲದೆ ಲಕ್ಷ್ಮಿ ಹೆಬ್ಬಾಳ್ಕರ್ ನಿನ್ನೆಯ ಭೇಟಿ ಒಂದು ಹಂತದಲ್ಲಿ ಸಿಎಂ ಯಡಿಯೂರಪ್ಪರಿಗೆ ಇರಿಸು ಮುರಿಸಾಗಿಸಿದೆ ಎಂಬ ಮತುಗಳು ಕೇಳಿ ಬರುತ್ತಿವೆ. ಲಕ್ಷ್ಮಿ ಹೆಬ್ಬಾಳ್ಕರ್ ತಂದಿದ್ದ ಬೇಡಿಕೆಗಳಿಗೆಲ್ಲ ಆಯ್ತು ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಯಾಕಂದರೆ ಎಲ್ಲಾದರು ಈ ಬೆಳವಣಿಗೆ ರಮೇಶ್ ಜಾರಕಿಹೋಳಿ ಕಣ್ಣು ಕೆಂಪಾಗಿಸಬಹುದು ಎಂದು ಸಿಎಂ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬೇಗ ಕಳುಹಿಸಿ ಕೈ ತೊಳೆದುಕೊಂಡಿದ್ದಾರೆ.
ಇತ್ತ ಕಾಂಗ್ರೆಸ್ ಪಾಳಯದಲ್ಲು ಕೂಡ ಇಂತದ್ದೇ ಗುಮಾನಿ ವ್ಯಕ್ತವಾಗುತ್ತಿದೆ. ಕ್ಷೇತ್ರದ ಕೆಲಸವೇ ಇರಬಹುದು ಆದರೆ ಅನರ್ಹ ಶಾಸಕರ ಕುರಿತ ಕೋರ್ಟ್ ತೀರ್ಪಿನಂತಹ ಮಹತ್ವದ ದಿನ ಹೋಗಿದ್ದೇಕೆ. ಆ ನಡೆ ಹಿಂದಿನ ಲೆಕ್ಕಾಚಾರ ಏನು ಅನ್ನೋ ಅಸಮಾಧಾನ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಚಾಣಕ್ಷ ನಡೆಯ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಿಎಂ ಭೇಟಿ ಕೇವಲ ಕ್ಷೇತ್ರದ ಕೆಲಸಕ್ಕಲ್ಲ. ನಿನ್ನೆಯ ಭೇಟಿ ಉದ್ದೇಶ ಪೂರ್ವಕ ಮತ್ತು ಮಾಜಿ ರಾಜಕೀಯ ಗುರುವಿಗೆ ಹಾಕಿದ ಪರೋಕ್ಷ ಸವಾಲು ಎಂದು ಹೇಳಲಾಗುತ್ತಿದೆ.