‘ಗಾಂಧಿಜೀಯ ಪ್ರತಿಮೆ ಮಾಡಲಿ, ಆದರೆ ಸೋನಿಯಾ ಗಾಂಧಿ ಪ್ರತಿಮೆ ಮಾಡಲು ಬಿಡಲ್ಲ’ – ಕಲ್ಲಡಕ

ಮಹಾತ್ಮ ಗಾಂಧಿಜೀಯ ಪ್ರತಿಮೆ ಮಾಡಲಿ, ಆದರೆ ಸೋನಿಯಾ ಗಾಂಧಿ ಪ್ರತಿಮೆ ಮಾಡಲು ಬಿಡಲ್ಲ ಎಂದು ಡಿ.ಕೆ.ಸುರೇಶ್ ಗೆ ಕಲ್ಲಡಕ ಪ್ರಭಾಕರ್ ಟಾಂಗ್ ಕೊಟ್ಟಿದ್ದಾರೆ.

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರಕ್ಕೆ ಮಾತನಾಡಿದ ಕಲ್ಲಡಕ ಪ್ರಭಾಕರ್, ನಾವು ಶಾಂತಿ ಕದಡುವ ಪ್ರಯತ್ನ ಮಾಡಿದ್ದೀವಾ? ಅವರ ಪತ್ರಿಕೆ ಹೇಳಿಕೆಯನ್ನ ಗಮನಿಸಿದ್ದೇನೆ. ಹಿಂದುಗಳ ಪರವಾಗಿ ನಾವು ಹನುಮಂತನ ರೀತಿ ನಿಂತಿದ್ದೇವೆ.

ಹಿಂದೂಗಳನ್ನ ಮತಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಅಲ್ಲಾ, ಏಸು ಬಗ್ಗೆ ನಮಗೆ ಬೇಸರವಿಲ್ಲ. ಆದರೆ ಅವರ ಹೆಸರಿನಲ್ಲಿ ಮತಾಂತರ ಮಾಡುವವರ ಬಗ್ಗೆ ಬೇಸರವಿದೆ. ಪಾಪಾ ಡಿ.ಕೆ.ಶಿವಕುಮಾರ್ ಗೆ ನಾನ್ಯಾರು ಅಂತಾ ಗೊತ್ತಿಲ್ಲ, ಇರಲಿ. ನಮಗೆ ಸಾವಿರ ದೇವರು, ಆದರೆ ಅವರಿಗೆ ಏಸು ಒಬ್ಬನೇ.
ಶಿವಕುಮಾರ್ ಗೆ ಲೂಸ್ ಮೋಷನ್ ಆದರೆ ಏಸು ಬರ್ತಾನ . ಆದರೆ ನಮಗೆ ಶಿವ, ಪಾರ್ವತಿ, ಚಾಮುಂಡಿ, ಕಾಳಿ, ಕಬ್ಬಾಳಿ ಹೀಗೆ ಸಾವಿರಾರು ದೇವರು ಬರ್ತಾರೆ.

ಶಿವ, ಸುರೇಶ ಅಂತಾ ಹೆಸರಿಟ್ಟುಕೊಂಡಿದ್ದೀರ. ಆದರೆ ಮತಬ್ಯಾಂಕ್ ಗಾಗಿ ಈ ರಾಜಕಾರಣ ಮಾಡ್ತಿದ್ದೀರಾ. ಮುಂದಿನ ಪೀಳಿಗೆಗೆ ಹಿಂದೂ ಸಮಾಜವನ್ನ ಉಳಿಸಿ.
ಓಟು, ನೋಟಿಗಾಗಿ ಈ ರಾಜಕಾರಣ ಮಾಡ್ತಿದ್ದೀರಿ. ನಿಮ್ಮ ಮಕ್ಕಳು, ಮೊಮ್ಮಕ್ಕಳು ಇರುವರೆಗೂ ದುಡ್ಡಿದೆ. ಸರ್ಕಾರ ಇಡಿದಿರೋದು ಸ್ವಲ್ಪ, ಜೈನಿನಲ್ಲಿದ್ದದ್ದು ಸ್ವಲ್ಪ. ಒಂದು ಮದುವೆಯಲ್ಲಿ ಕರೆದು ಮಾತನಾಡಿಸಿದ್ದೀರಿ . ಅದೇ ಪ್ರಭಾಕರ್ ಭಟ್ ನಾನು ಎಂದು ಡಿಕೆಶಿ ಗೆ ಟಾಂಗ್ ಕೊಟ್ಟಿದ್ದಾರೆ. ಅಮೇರಿಕಾದಲ್ಲಿ ನಿರ್ಮಾಣ ಮಾಡಲಿ, ಇಂಗ್ಲೆಂಡ್ ನಲ್ಲಿ ನಿರ್ಮಾಣ ಮಾಡಲಿ. ಅಲ್ಲಿ ಏಸು ಬಗ್ಗೆ ನಂಬಿಕೆಯೇ ಇಲ್ಲ. ಚರ್ಚ್ ಗಳು ಖಾಲಿ ಖಾಲಿ ಆಗಿದ್ದಾವೆ ಅಲ್ಲಿ. ಆದರೆ ಇಲ್ಲಿ ಚರ್ಚ್ ಗಳನ್ನ ಕಟ್ಟಲು ಮುಂದಾಗಿದ್ದೀರಿ. ಇದು ದೇಶ ದ್ರೋಹದ ಕೆಲಸ, ಹಿಂದೂ ಸಮಾಜ ಎಚ್ಚೆತ್ತುಕೊಂಡಿದೆ. ನಿಮ್ಮ ಬಲಿದಾನ ಆಗಲಿದೆ, ನಾವು ಬಲಿದಾನಕ್ಕೆ ತಯಾರಿದ್ದೇವೆ.
ಅಮೇರಿಕಾ, ಇಂಗ್ಲೆಂಡ್ ಗೆ ದೇಶ ಮಾರುತ್ತೀರಾ.

ಧರ್ಮದ ತಟ್ಟಗೆ ಕಲ್ಲು ಹಾಕೋಕೆ ಹೊರಟ್ಟಿದ್ದೀರಾ. ಶ್ರೀರಾಮ, ಶ್ರೀಕೃಷ್ಣ ಹಿಂದೂ ಸಮಾಜಕ್ಕಾಗಿಯೇ ಹೋರಾಟ ಮಾಡಿರೋದು. ಆಂಧ್ರದ ಮಾಜಿ ಸಿಎಂ ರಾಜಶೇಖರ್ ರೆಡ್ಡಿ ತಿರುಪತಿ ತಿಮ್ಮಪ್ಪನಿಗೆ ಅವಮಾನ ಮಾಡಿದ್ದ. ತಿಮ್ಮಪ್ಪನ ಸ್ಥಳದಲ್ಲಿ ಕ್ರಿಶ್ಚಿಯನ್ ರಿಗೆ 1 ಸಾವಿರ ಮನೆಗಳನ್ನ ಕಟ್ಟಿಕೊಟ್ಡಿದ್ದ.
ಲಾಡು ಪ್ರಸಾದಕ್ಕೆ ಒಬ್ಬ ಕ್ರಿಶ್ಚಿಯನ್ ಗೆ ಟೆಂಡರ್ ಕೊಟ್ಟಿದ್ದ. ಅವನ ಸ್ಥಿತಿಯೇ ನಿಮಗೆ ಗಟ್ಟಿ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.

ನೀವು ಮಾಜಿ ಮಂತ್ರಿಯಲ್ಲ, ಕಂತ್ರಿಯಾಗಿದ್ದೀರಿ. ಡಿಕೆ ಬ್ರದರ್ಸ್ ಇದರಿಂದ ಹಿಂದೆ ಹೋಗಿ. ಇಲ್ಲಿರುವ ಮಸೀದಿ ಚರ್ಚ್ ಗಳು ನಮ್ಮ ಭೂಮಿ. ಅಮೇರಿಕಾ, ಇಂಗ್ಲೆಂಡ್ ನಿಂದ ಬಂದಿಲ್ಲ ಭೂಮಿ . ಅಕ್ರಮ ಬಾಂಗ್ಲರಿಗೆ ಸರ್ಪೋರ್ಟ್ ಮಾಡ್ತಿರಲ್ಲ. ನೀವು ನಿಮ್ಮ ಕುಟುಂಬ ಉಳಿಯಲ್ಲ ರೀ. ನಾವು ನಮ್ಮನ್ನ ರಕ್ಷಣೆ ಮಾಡಿಕೊಳ್ತೇವೆ. ಮುನೇಶ್ವರ ದೇವಸ್ಥಾನವನ್ನ ಅದೇ ಸ್ಥಳದಲ್ಲಿ ಕಟ್ಟುತ್ತೇವೆ. ನಿಮ್ಮ ತಲೆಯನ್ನ ಅಲ್ಲಿಟ್ಟು ಪ್ರಾರ್ಥನೆ ಮಾಡಬೇಕು. ಇಲ್ಲಂದ್ರೆ ನೀವು ಮತ್ತೆ MLA, MP ಆಗಲ್ಲ ರೀ ಎಂದು ಕನಕಪುರದಲ್ಲಿ ಡಿ.ಕೆ.ಬ್ರದರ್ಸ್ ವಿರುದ್ಧ ಕಲ್ಲಡಕ ಪ್ರಭಾಕರ್ ಗುಡುಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights