ವಿವಾದಾತ್ಮಕ ಹೇಳಿಕೆ ಹಿನ್ನಲೆ : ಇಂದು ಸೋಮಶೇಖರ್​ ರೆಡ್ಡಿ ಮನೆಗೆ ಜಮೀರ್ ಅಹ್ಮದ್​ ಮುತ್ತಿಗೆ..!

ಕೆಲ ದಿನಗಳ ಹಿಂದೆ ವಿವಾದಾತ್ಮ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ವಿರುದ್ಧ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಸಿಡಿದೆದ್ದಿದ್ದಾರೆ.

“ಹಿಂದೂಗಳು ಉಫ್​ ಎಂದು ಊದಿದರೆ ಮುಸಲ್ಮಾನರೆಲ್ಲಾ ಹಾರಿ ಹೋಗ್ತಾರೆ ಎಂದಿದ್ದರಲ್ಲ. ನಿಮ್ಮ ಊರಿಗೆ ಬರುತ್ತೇವೆ. ಮೊದಲು ನನ್ನನ್ನು ಉಫ್​ ಎಂದು ಊದಿ ಏನಾಗುತ್ತದೆ ನೋಡುತ್ತೇನೆ,” ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಗೆ ಜಮೀರ್​ ಸವಾಲು ಹಾಕಿದ್ದರು. ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಮೀರ್​, ಬಳ್ಳಾರಿಗೇ ಬರುತ್ತೇನೆ, ಅದೇನು ಮಾಡ್ತೀರೋ ಮಾಡಿ ಎಂದು ಗುಡುಗಿದ್ದರು. ಇದರ ಬೆನ್ನಲ್ಲೇ ಇಂದು ಬಳ್ಳಾರಿಗೆ ಭೇಟಿ ನೀಡಿದ್ದಾರೆ.

ಬೆಂಗಳೂರು, ಚನ್ನಪಟ್ಟಣ, ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರೊಂದಿಗೆ ಇಂದು ಜಮೀರ್ ಅಹ್ಮದ್ ಸೋಮೇಖರ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾದ ಕಾರಣಕ್ಕೆ ಜಮೀರ್​ ಮತ್ತವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆದರೆ ಈ ವೇಳೆ ಮಾತನಾಡಿದ ಜಮೀರ್ ಅವರು ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಬಳಿ ಪೊಲೀಸರಿಂದ ಪಡೆದ ಅನುಮತಿ ಕೂಡ ಇದೆ ಎಂದಿದ್ದಾರೆ. ಮಾತು ಆಡಿದಂತೆ ನಾನು ನಡೆದುಕೊಂಡಿದ್ದೇನೆ. ಯಾರು ಬರುತ್ತಾರೋ ಬರಲಿ ಎಂದು ಸವಾಲ್ ಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights