ಗಾರ್ಡ್ ಆಪ್ ಹಾನರ್ ಬೇಡ : ಜೀರೋಟ್ರಾಪಿಕ್ ತೇಜಿಸಿದ ಗೃಹ ಮಂತ್ರಿ..
ಇನ್ನುಮುಂದೆ ಜೀರೋ ಟ್ರಾಫಿಕ್ ಹಾಗೂ ಗಾರ್ಡ್ ಆಪ್ ಹಾನರ್ ಬೇಡವೆಂದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿಂದ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೀರೋ ಟ್ರಾಫಿಕ್ ನಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ. ಸಂಚಾರಕ್ಕೆ, ತುರ್ತು ಪರಿಸ್ಥಿತಿ ಸವಾರರಿಗೆ, ಅದಕ್ಕಿಂತ ಹೆಚ್ಚಾಗಿ ಅಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಗಾರ್ಡ್ ಆಪ್ ಹಾನರ್ ಬೇಡವೆಂದ ಹೇಳಿದ್ದಾರೆ.
ಇನ್ನುಮುಂದೆ ಜೀರೋ ಟ್ರಾಫಿಕ್ ಹಾಗೂ ಗಾರ್ಡ್ ಆಪ್ ಹಾನರ್ ತೆಜಿಸಲಾಗಿದೆ ಎನ್ನುವ ವಿಚಾರವನ್ನು ಗೃಹ ಸಚಿವರು ಟ್ವಿಟರ್ ಮಾಡಿದ್ದು ಸಾರ್ವಜನಿಕರಲ್ಲಿ ಸಂತಸ ತಂದಿದೆ.
#ಪೋಲಿಸ್ ಇಲಾಖೆ ನೀಡಿದ #ಜೀರೋಟ್ರಾಫಿಕ್ ನಿಂದ ಸಾಮಾನ್ಯ ಜನರಿಗೆ ತುಂಬಾ ತೊಂದರೆಗಳಾಗಿದ್ದು ಕಂಡುಬಂದಿದ್ದು ಈ ಕುರಿತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನುಮುಂದೆ #ZeroTraffic ನೀಡಬೇಡಿ ಹಾಗೂ ಪ್ರತಿಬಾರಿ ಭೇಟಿನೀಡಿದಾಗ ಇಲಾಖೆಯಿಂದ ನೀಡುವ ಗಾರ್ಡ್ ಆಫ್ ಹಾನರ್ ವನ್ನು ಬೇಡವೆಂದು ಸೂಚಿಸಿದ್ದೇನೆ.
— Basavaraj S Bommai (@BSBommai) August 30, 2019