ಜಿಂಕೆ ಭೇಟೆಯಾಡಿ ಜಿಂಕೆ ಮಾಂಸ ಕಡಿಯುವಾಗ ಸಿಕ್ಕಿಬಿದ್ದ ಮೂವರು ಭೇಟೆಗಾರರು…

ಜಿಂಕೆ ಭೇಟೆಯಾಡಿ ಜಿಂಕೆ ಮಾಂಸ ಕಡಿಯುವಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿ ಮೂವರು ಭೇಟೆಗಾರರನ್ನ ಬಂಧಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಗ್ರಾಮದಲ್ಲಿ ನಡೆದಿದೆ.

ಮಾಗುಂಡಿ ಗ್ರಾಮದ ಶಶಿಕುಮಾರ್, ಶ್ರೀನಿವಾಸ್, ವೆಂಕಟೇಶ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತೋಟದ ಮಾಲೀಕ ಕೌಶಿಕ್ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳು ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ ಹಿನ್ನೆಲೆ ಜಿಂಕೆ ತಂತಿ ಬೇಲಿಗೆ ಸಿಲುಕಿ ಸಾವನಪ್ಪಿತ್ತು.

ಸಾವನಪ್ಪಿದ ಜಿಂಕೆಯ ಮಾಂಸ ಕಡಿಯುವಾಗ ಬಾಳೆಹೊನ್ನೂರು ಆರ್ ಎಫ್ ಓ ನಿರಂಜನ್ ದಾಳಿ ಮಾಡಿ ಮೂವರು ಆರೋಪಿಗಳನ್ನ ಬಂಧಿಸಿ, ಜಿಂಕೆ ಮಾಂಸವನ್ನ ವಶಪಡಿಸಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights