ಜೈಲಿನಿಂದಲೇ ಇಮ್ಮಡಿ ಮಹದೇವಸ್ವಾಮಿ ಕರಾಮತ್ತು : ಸಾಲೂರು ಮಠದ ವಿಲ್ ರದ್ದು ಮಾಡಿಸಿದ ಸ್ವಾಮಿ
ಕಿಚ್ ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ ಜೈಲಿನಿಂದಲೇ ಕರಾಮತ್ತು ಮಾಡಿದ್ದಾರ.
ಜೈಲಿನಿಂದಲೇ ಸಾಲೂರು ಮಠದ ಸ್ವಾಮೀಜಿಯಿಂದ ಮಠದ ಜವಾಬ್ದಾರಿಯ ವಿಲ್ ರದ್ದು ಮಾಡಿದ್ದಾರೆ. ತಮ್ಮ ಶಿಷ್ಯ ನಾಗೇಂದ್ರನಿಗೆ ಜವಾಬ್ದಾರಿ ನೀಡಿ ವಿಲ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ನೆನ್ನೆ ಮೈಸೂರಿನ ರಾಮಕೃಷ್ಣನಗರದ ಉಪನೋಂದಣಿ ಕಚೇರಿಯಲ್ಲಿ ವಿಲ್ ರದ್ದಾಗಿದೆ.
ಜೈಲಿನಿಂದಲೇ ತನ್ನ ಬೆಂಬಲಿಗರು ಶಿಷ್ಯರ ಮೂಲಕ ವಿಲ್ ಮಾಡಿದ ದಿನದಿಂದ ವಿಲ್ ರದ್ದು ಮಾಡಿಸಲು ಒತ್ತಡ ಹಾಕುತ್ತಿದ್ದರು. ಒತ್ತಡಕ್ಕೆ ಮಣಿದು ತಾವೇ ಮಾಡಿದ ವಿಲ್ ರದ್ದು ಮಾಡಿದ ಸಾಲೂರು ಮಠದ ಹಿರಿಯ ಸ್ವಾಮೀಜಿ ಮೌನಕ್ಕೆ ಶರಣಾಗಿದ್ದಾರೆ.