ತಂದೆ ಸಿದ್ರಾಮಯ್ಯರ ರಾಜಕೀಯ ಭವಿಷ್ಯದ ರಹಸ್ಯ ಬಿಚ್ಚಿಟ್ಟ ಪುತ್ರ ಯತೀಂದ್ರ….

ಉಪ ಚುನಾವಣೆ ಗೆಲುವಿನ ಮೇಲೆ ಮಾಜಿ ಸಿ.ಎಂ‌. ಸಿದ್ರಾಮಯ್ಯ ಭವಿಷ್ಯ ನಿಂತಿದೆ ಎನ್ನುವ ಅಪ್ಪನ‌ ರಾಜಕೀಯ ಭವಿಷ್ಯದ ರಹಸ್ಯವನ್ನು ಮಂಡ್ಯದ ಕೆ.ಆರ್.ಪೇಟೆ ಪ್ರಚಾರದ ವೇಳೆ ಪುತ್ರ ಯತೀಂದ್ರ ಬಿಚ್ಚಿಟ್ಟಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಸಿದ್ರಾಮಯ್ಯ ಪುತ್ರ ವರುಣಾ ಶಾಸಕ ಡಾ. ಯತೀಂದ್ರ ಸಿದ್ರಾಮಯ್ಯ ಮಾತನಾಡಿ, ಸಿದ್ರಾಮಯ್ಯನವರನ್ನು ನೀವು ಇಷ್ಟು ದೂರ ಕೈ ಹಿಡಿದು ನಡೆಸಿಕೊಂಡು ಬಂದಿದ್ದೀರಾ. ಅವ್ರ ಪ್ರತಿಯೊಂದು ಹೋರಾಟದಲ್ಲೂ ನೀವು ಬೆಂಬಲ ಕೊಟ್ಕೊಂಡು ಬಂದಿದ್ದೀರಾ. ಈ ಭಾಗ ಏನಿದೆ ಮಂಡ್ಯ ಮೈಸೂರು, ಸುತ್ತಮುತ್ತಲ ದಕ್ಷಿಣ ಕನ್ನಡ ಜಿಲ್ಲೆಗಳೇವೆ ಇವು ಅವ್ರ ಕಾರ್ಯಕ್ಷೇತ್ರ. ಇಲ್ಲಿ ನಾವೇನಾದ್ರು ಸೋತೋದ್ರೆ, ಈಗಾಗಲೇ ನಮಗೆ ವಿಧಾನಸಭೆ ಬಹುಮತ ಸಿಕ್ಕಿಲ್ಲ. ಲೋಕಸಭಡ ಚುನಾವಣೇಲಿ ನಮ್ಮ ಕಾಂಗ್ರೆಸ್ ಪಕ್ಷ ಸೋತಿದೆ. ಈಗ ನಡೀತೀರೋ ಉಪಚುನಾವಣೇಲೂ ಸೋತೋದ್ರೆ ಅದ್ರ ನೇರ ಪರಿಣಾಮ ಸಿದ್ರಾಮಯ್ಯ ನಾಯಕತ್ವದ ಮೇಲಾಗುತ್ತೆ ಎಂದರು.

ಏನಂತಾ ಹೇಳ್ತಾರೆ ಎಲ್ಲಾರೂ, ಈಗಾಗಲೇ ಹಲವ್ರು ಅವ್ರನ್ನ ಟೀಕೆ ಮಾಡಿ ಏಕಾಂಗಿಯಾಗಿದ್ದಾರೆ‌ ಅಂತಾ ಹೇಳ್ತಾ ಇದ್ದಾರೆ ಬೇರೆ ಪಕ್ಷದವರೆಲ್ಲ ಸೇರಿ. ಈಗ ಇಲ್ಲೂ ಕೂಡ ಸೋತೋದ್ರೆ ನಿಮ್ಮ ಭಾಗದಲ್ಲೆ ನಿಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳೋ ತಾಕತ್ತಿಲ್ಲ ಅಂತಾ. ಅಲ್ದೆ ಇನ್ನು ಯಾಕೆ ರಾಜಕೀಯದಲ್ಲಿ ಇದ್ದೀರೀ ವಿಪಕ್ಷ ನಾಯಕದಿಂದ ಕೆಳಗಿಳಿರಿ, ಇಲ್ಲಿಗೆ ಸಾಕ್ಮಾಡಿ ಅಂತಾ ಎಲ್ರೂ ಪ್ರಶ್ನೆ ಮಾಡ್ತಾರೆ. ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಇಷ್ಟು ದಿನ ಅವ್ರಿಗೆ ಬೆಂಬಲ ಕೊಟ್ಟಿದ್ದೀರಾ,ಈ ಕೊನೆ ಹಂತದಲ್ಲೂ ಅವ್ರ ಕೈ ಹಿಡಿಯಿರಿ. ಆ ಮೂಲಕ ನಮ್ಮ ತಂದೆ ಸಿದ್ರಾಮಯ್ಯ ರ ಕೈ ಬಲಪಡಿಸಿ ಎಂದು ಯತೀಂದ್ರ‌ ಮನವಿ ಮಾಡಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights