ದಸರಾಗೂ ಬಂತು ಪಾಲಿಟಿಕ್ಸ್ ಜಗಳ : ಶಾಮಿಯಾನ ವಿಚಾರಕ್ಕೆ 2 ಪಕ್ಷದ ನಡುವೆ ಗಲಾಟೆ
ದಸರಾಗೂ ಬಂತು ಪಾಲಿಟಿಕ್ಸ್ ಜಗಳ. ಹೌದು… ಇಷ್ಟು ದಿನ ರಾಜಕೀಯದಲ್ಲಿ, ನೆರೆ ಪರಿಹಾರದಲ್ಲಿದ್ದ ಪಾಲಿಟಿಕ್ಸ್ ಸದ್ಯ ದಸರಾಕ್ಕೂ ಕೂಡ ಎಂಟ್ರಿ ಕೊಟ್ಟಿದೆ.
ಶ್ರೀರಂಗಪಟ್ಟಣ ದಸರಾದಲ್ಲಿ ಪೆಂಡಾಲ್ ಹಾಕುವ ವಿಚಾರಕ್ಕೆ ಪಾಲಿಟಿಕ್ಸ್ ಕ್ರಿಯೇಟ್ ಆಗಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರ ನಡುವೆ ಜಗಳ ಸೃಷ್ಟಿಯಾಗಿದೆ. ಪರಿಣಾಮ ದಸರಾ ಶಾಮಿಯಾನ ಜಗಳ ಬೀದಿಗೆ ಬಂದಿದೆ.
ಇಷ್ಟು ವರ್ಷ ನಾವು ದಸರಾಗೆ ನಾವು ಶಾಮಿಯಾನ ಹಾಕುತ್ತಿದ್ದೇವೆ ಎನ್ನುತ್ತಾ ಎರಡು ಪಕ್ಷದವರು ಕಿತ್ತಾಟ ನಡೆಸಿದ್ದಾರೆ. ಆಗ ನೀವೂ ಹಾಕಿಸುತ್ತಾ ಇದ್ರಿ, ಈಗ ನಮ್ಮ ಸರ್ಕಾರ ಇದೆ. ಹೀಗಾಗಿ ಶಾಮಿಯಾನವನ್ನು ನಾವು ಹಾಕಿಸುತ್ತೇವೆ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು.
ನಿನ್ನೆ ಶ್ರೀರಂಗಪಟ್ಟಣದಲ್ಲಿ ಶಾಮಿಯಾನ ವಿಚಾರಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷದ ಕಡೆಯವರ ಶಾಮಿಯಾನ ಲಾರಿಗಳನ್ನು ನಿಲ್ಲಿಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ನಮ್ಮವರೇ ಹಾಕುತ್ತಾರೆ ಎಂದು ಜೆಡಿಎಸ್ನವರು, ಇಲ್ಲ ಈ ಸಲ ನಮ್ಮವರು ಹಾಕುತ್ತಾರೆ ಎಂದು ಬಿಜೆಪಿ ಅವರು. ಒಟ್ಟಿನಲ್ಲಿ ಯಾರು ಶಾಮಿಯಾನ ಹಾಕುತ್ತಾರೆ. ಈ ಜಗಳ ಯಾವ ಹಂತ ತಲುಪುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.