ಕಡ್ಡಾಯ ವರ್ಗಾವಣೆಗೆ ಮನನೊಂದು ಆಘಾತಕ್ಕೊಳಗಾಗಿದ್ದ ಶಿಕ್ಷಕ ಸಾವು‌…!

ಕಡ್ಡಾಯ ವರ್ಗಾವಣೆಗೆ ಮನನೊಂದು ಆಘಾತಕ್ಕೊಳಗಾಗಿದ್ದ ಶಿಕ್ಷಕ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸುಭಾಷ್ ತರ್ಲಘಟ್ಟ (52) ಮೃತ ಶಿಕ್ಷಕ. ಹುಬ್ಬಳ್ಳಿಯ ಆನಂದನಗರದ ಸರ್ಕಾರಿ ಹೈಸ್ಕೂಲ್ ಶಿಕ್ಷಕ‌ ಕಡ್ಡಾಯ ಶಿಕ್ಷಕರ ವರ್ಗಾವಣೆ ನಿಯಮದಿಂದ ತೀವ್ರ ನೊಂದಿದ್ದರು. ಕಡ್ಡಾಯ ವರ್ಗಾವಣೆ ನಿಯಮದಡಿ ಸೆಪ್ಟೆಂಬರ್ 11ರಂದು ಇವರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗಿರಿ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು.

ಅಂದಿನಿಂದ ಸುಭಾಷ್ ಮಾನಸಿಕ ಶಾಕ್‌ಗೆ ಒಳಗಾಗಿದ್ದರು. ಬ್ರೇನ್ ಹ್ಯಾಮರೇಜ್‌ ಆಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights