ದಸರಾ ಹೆಲಿರೈಡ್ ಹೆಸರಲ್ಲಿ ಕೆ.ಆರ್.ಎಸ್.ಡ್ಯಾಂ ಮೇಲೆ ಹಾರಾಟ – ಹಾರಾಟ ರದ್ದುಗೊಳಿಸಿದ ಮಂಡ್ಯ ಜಿಲ್ಲಾಧಿಕಾರಿ
ದಸರಾ ಹೆಲಿರೈಡ್ ಹೆಸರಲ್ಲಿ ಕೆ.ಆರ್.ಎಸ್.ಡ್ಯಾಂ ಮೇಲೆ ಹಾರಾಟ ನಡೆಸ್ತಿದ್ದ ಹೆಲಿಕ್ಯಾಪ್ಟರ್ ನ್ನು ಹಾರಾಟ ನಡೆಸದಂತೆ ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸೂಚಿಸಿದ್ದಾರೆ.ಕೆ.ಆರ್.ಎಸ್. ನಲ್ಲಿ ಫಲಫುಷ್ಪ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ಬಳಿಮ ಮಾತನಾಡಿದ್ದು ಡ್ಯಾಂ ಮೇಲೆ ನಿಯಮ ಮೀರಿ ಹೆಲಿಕ್ಯಾಪ್ಟರ್ ಹಾರಾಟ ನಡೆಸ್ತಿರೋ ದೂರು ಬಂದ ಹಿನ್ನಲ್ಲೆಯಲ್ಲಿ ಜ ಯಾವುದೇ ಕಾರಣಕ್ಕೂ ಹೆಲಿಕ್ಯಾಪ್ಟರ್ ಹಾರಾಟ ನಡೆಯದಂತೆ ನೋಡಿಜೊಳ್ಳುವಂತೆ ಸೂಚಿಸಿದ್ರು.
ಡ್ಯಾಂ ನ ಭದ್ರತಾ ದೃಷ್ಟಿಯಿಂದ ಹೆಲಿಕ್ಯಾಪ್ಟರ್ ಹಾರಾಟ ನಿಷೇಧ ಹೇರಲಾಗಿದೆ. ಈಗ ಡ್ಯಾಂ ಮೇಲೆ ಹಾರಾಟ ಮಾಡ್ತಿರೋ ಆರೋಪ ಕೇಳಿ ಬಂದಿದ್ದು ಹೆಲಿ ರೈಡ್ ನ ಆಯೋಜಕರಲ್ಲಿ ಹೆಲಿಕ್ಯಾಪ್ಟರ್ ಹಾರಾಟದ ಬಗ್ಗೆ ಹಾರಾಟ ನಡೆಸದಂತೆ ಆಯೋಜಕರಿಗೆ ಸೂಚನೆ ನೀಡೋದಾಗಿ ತಿಳಿಸಿದ್ರು.