‘ನೀವು ಬೆನ್ನಿಗೆ ಚೂರಿ ಹಾಕುತ್ತಿದ್ದೀರಿ’ ಸಂಸದ ಸಂಗಣ್ಣ ಕರಡಿ ವಿರುದ್ದ ಆಕ್ರೋಶ

ಕೊಪ್ಪಳ ಸಂಸದ ಸಂಗಣ್ಣ ಕರಡಿ ವಿರುದ್ದ  ಆರ್ ಬಸನಗೌಡ ತುರ್ವಿಹಾಳ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ನೀವು ಬೆನ್ನಿಗೆ ಚೂರಿ ಹಾಕುತ್ತಿದ್ದೀರಿ. ಅನರ್ಹರ ಮಾತು ಕೇಳಿ ಬಸನಗೌಡರನ್ನು ಮುಗಿಸುವ ಯತ್ನ ಮಾಡಿದ್ದೀರಿ. ಅಲ್ಪ ಮತದಿಂದ ಸೋತಿದ್ದರೂ ಬಸನಗೌಡ ನಿಮ್ಮ‌ ಗೆಲುವಿಗೆ ಶ್ರಮಿಸಿ ಮಸ್ಕಿಯಿಂದ‌ ಮತಗಳು ಬರುವಂತೆ ಮಾಡಿದ್ದಾರೆ. ಕೊಪ್ಪಳದಲ್ಲಿ ರೆಡ್ಡಿ ಜನಾಂಗದ ಚಂದ್ರಶೇಖರ ಮುಗಿಸಿದಂತೆ ಇಲ್ಲಿ ಬಸನಗೌಡರ ರಾಜಕೀಯ ಭವಿಷ್ಯ ಮುಗಿಸಲು ಹೊರಟಿದ್ದೀರಿ. ನಿಮ್ಮ ಆಟ ನಡೆಯುವುದಿಲ್ಲ ಎಂದು  ಆಕ್ರೋಶ ಭರಿತ ಪೋಸ್ಟಗಳನ್ನು ಬಸನಗೌಡ ಅಭಿಮಾನಿಗಳು ಸಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಬಸನಗೌಡ ತುರ್ವಿಹಾಳ‌ ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡ ವಿರುದ್ದ ಸ್ಪರ್ಧಿಸಿ ಅಲ್ಪ ಮತದಿಂದ ಪರಾಜಿತಗೊಂಡಿದ್ದಾರೆ. ಈಗ ಅನರ್ಹ‌ ಶಾಸಕರಿಗೆ ಉಪಚುನಾವಣೆಯಲ್ಲಿ ಅನುಕೂಲ ಮಾಡಿಕೊಡುವ ಹಿನ್ನೆಲೆ ನೇಮಕದ ವಿರೋಧವಾಗಿ ಬಸನಗೌಡ ಅಭಿಮಾನಿಗಳಿಂದ‌ ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights