ನೆರೆ ಪರಿಹಾರಕ್ಕೆ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು…
ನೆರೆ ಪರಿಹಾರಕ್ಕೆ ರಾಜ್ಯದ ಬೊಕ್ಕಸದಲ್ಲಿ ಹಣವಿದ್ದು ಕೇಂದ್ರದ ಅವಶ್ಯಕತೆ ಇಲ್ಲಾ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಹಾಸನ ಜಿಲ್ಲೆ ಬೇಲೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯದ ಬೊಕ್ಕಸದಲ್ಲಿ ಹಣವಿದ್ದರೆ ಏಕೆ ಇಂಡಿಯಾ ಸೌತ್ ಆಫ್ರಿಕಾ T20 ಮ್ಯಾಚ್ ನಲ್ಲಿ ಸಿಎಂ ರಾಜ್ಯ ಬೊಕ್ಕಸಕ್ಕೆ ಹಣ ಕೇಳಲು ಹೋಗಿದ್ರು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ತಿರುಗೇಟು ನಿಡಿದ್ದಾರೆ.
ಇದೇ ಉಪ ಚುನಾವಣೆ ಬಗ್ಗೆ ಮಾತನಾಡಿದ ಪ್ರಜ್ವಲ್, ಹುಣಸೂರಿನಲ್ಲಿ ಟಿಕೇಟ್ ಆಕಾಂಕ್ಷಿಗಳು ಅರ್ಜಿ ಹಾಕಿ ಎಂದು ಹೇಳಿದ್ದೇವೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ಜಿಟಿ,ದೇವೇಗೌಡರ ಪುತ್ರ ಹರೀಶ್ ಗೌಡ ಹುಣಸೂರಿನಿಂದ ಸ್ಪರ್ಧಿಸಿದ್ರೆ ಒಳ್ಳೆಯದು. ಹರೀಶ್ ಗೌಡ ಜೆಡಿಎಸ್ ಅಭ್ಯರ್ಥಿಯಾದ್ರೆ ತುಂಬಾ ಸಂತೋಷ. ಪ್ರಜಾಪ್ರಭುತ್ವದಲ್ಲಿ ಯಾರೇ ಸ್ಪರ್ಧೆ ಮಾಡಿದ್ರೂ ಅಭ್ಯಂತರವಿಲ್ಲಾ. ಉಪ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಪಿತೃ ಪಕ್ಷ ಮುಗಿದ ಬಳಿಕ ಸೋಮವಾರದಿಂದ ಚುನಾವಣಾ ಪ್ರಚಾರ ಆರಂಭಸುತ್ತೇನೆ.
ಚುನಾವಣೆಯಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ಸಂಭಂದ ಹೈಕೋರ್ಟ್ ನಿಂದ ನೋಟೀಸ್ ನೀಡಿಕೆ ವಿಚಾರ ಮಾತನಾಡಿದ ಪ್ರಜ್ವಲ್, ಈಗ ನನಗೆ ನೋಟೀಸ್ ಬಂದಿದೆ ಹೈಕೋರ್ಟ್ ಗೆ ಹಾಜರಾಗುತ್ತೇನೆ.ನಾನು ಹೆದರಿಕೊಂಡಿಲ್ಲಾ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ನಾನು ಧೈರ್ಯವಾಗಿ ಹೈಕೋರ್ಟ್ ವಿಚಾರಣೆ ಹೆದರಿಸುತ್ತೇನೆ.
ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್,ಡಿಕೆ ಟಾಕ್ ಫೈಟ್ ವಿಚಾರ ಮಾತನಾಡಿ, ಅವರು ಯಾವ ಸಮಯದಲ್ಲಿ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲಾ. ಅನರ್ಹ ಶಾಸಕರ ಸ್ಪರ್ಧೆ ವಿಚಾರ. ರಾಜ್ಯದ ಜನ್ರು ಅನರ್ಹ ಶಾಸಕರಿಗೆ ಬುದ್ದಿ ಕಲಿಸುತ್ತಾರೆ. ಹಿಂದಿನ ಸರ್ಕಾರದ ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ಸಿಎಂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.