ಅಳುವುದನ್ನು ತಡೆಯಲು ವಿಫಲವಾದ ತಂದೆ : 4 ವರ್ಷದ ಮಗುವಿನ ಕತ್ತು ಹಿಸುಕಿ ಕೊಲೆ!

ಗಾಜಿಯಾಬಾದ್‌ನ 28 ವರ್ಷದ ಯುವಕ ತನ್ನ ನಾಲ್ಕು ವರ್ಷದ ಮಗಳು ಅಳುವುದನ್ನು ತಡೆಯಲು ವಿಫಲವಾದ ಕಾರಣ ಅವಳನ್ನು ಕೊಂದಿದ್ದಾನೆ. ನೋಯ್ಡಾದಲ್ಲಿ ತನ್ನ ಹೆಂಡತಿಯನ್ನು ಹುಡುಕುತ್ತಾ ತನ್ನ ಆಟೋರಿಕ್ಷಾದಲ್ಲಿ ಮಗಳ ಮೃತ ದೇಹದೊಂದಿಗೆ ತಿರುಗಾಡುತ್ತಿರುವಾಗ ವಾಸುದೇವ್ ಗುಪ್ತಾ ಅವರನ್ನು ಗುರುವಾರ ಬಂಧಿಸಲಾಗಿದೆ.

ಸುಲ್ತಾನಪುರ ಮೂಲದ ಗುಪ್ತಾ ಅವರ ಪತ್ನಿ ಸುಮಾರು 20 ದಿನಗಳ ಹಿಂದೆ ಅವರನ್ನು ತೊರೆದ ನಂತರ ಅಸಮಾಧಾನಗೊಂಡಿದ್ದ ಗುಪ್ತಾ ತನ್ನ ಮಗಳು ಅಳುವುದನ್ನು ತಡೆಯಲು ಸಾಧ್ಯವಾಗದಿದ್ದಾಗ ಗುಪ್ತಾ ಮತ್ತಷ್ಟು ಕೋಪಗೊಂಡು ಮಗಳನ್ನು ಕೊಂದಿದ್ದಾನೆ.

ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕ ಗುಪ್ತಾ ಕಳೆದ ಕೆಲವು ವರ್ಷಗಳಿಂದ ಖೋಡಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಅವರ ಪತ್ನಿ ನೋಯ್ಡಾದ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದರು.

ಗುಪ್ತಾ ಅವರ ಪತ್ನಿ 20 ದಿನಗಳ ಹಿಂದೆ ತಮ್ಮ ಮೂರು ವರ್ಷದ ಮಗನೊಂದಿಗೆ ತೀವ್ರ ಜಗಳವಾಡಿ ಅವರನ್ನು ತೊರೆದಿದ್ದರು. ಅವಳು ನಾಲ್ಕು ವರ್ಷದ ಮಗಳನ್ನು ಗುಪ್ತಾರೊಂದಿಗೆ ಬಿಟ್ಟುಹೋಗಿದ್ದಳು.

ಗುರುವಾರ, ಮಗಳು ದೀರ್ಘಕಾಲ ಅಸಹನೀಯವಾಗಿ ಅಳುತ್ತಿದ್ದಳು. ಅಳುವುದನ್ನು ತಡೆಯಲು ವಿಫಲವಾದ ನಂತರ ಗುಪ್ತಾ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಗುಪ್ತಾ ತನ್ನ ಮಗಳ ನಿರ್ಜೀವ ದೇಹವನ್ನು ಟವೆಲ್‌ನಲ್ಲಿ ಸುತ್ತಿ ತನ್ನ ಹೆಂಡತಿಯನ್ನು ಹುಡುಕುತ್ತಾ ಗಾಜಿಯಾಬಾದ್‌ನ ನೋಯ್ಡಾ ಮತ್ತು ಖೋಡಾ ಕಾಲೋನಿಯ ಸುತ್ತ ತಿರುಗಲು ಪ್ರಾರಂಭಿಸಿದ. ಘಟನೆಯ ಬಗ್ಗೆ ಆತನ ಕಿರಿಯ ಸಹೋದರ ಪೊಲೀಸರನ್ನು ಎಚ್ಚರಿಸಿದ ನಂತರ ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.

ಕಿರಿಯ ಸಹೋದರ ರವಿ ಅವರು ಗುರುವಾರ ಸಂಜೆ 5 ಗಂಟೆಗೆ ಗುಪ್ತಾ ಅವರ ಮನೆಗೆ ಭೇಟಿ ನೀಡಿದ್ದರು. ಆಗ ಮನೆಯ ಗೇಟ್ ತೆರೆದಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಆ ನಂತರ ರವಿ ತನ್ನ ಸಹೋದರನನ್ನು ಕರೆದಾಗ, ಗುಪ್ತಾ ತನ್ನ ಮಗಳನ್ನು ಕೊಂದು ನೋಯ್ಡಾದಲ್ಲಿ ತನ್ನ ಹೆಂಡತಿಯನ್ನು ಹುಡುಕುತ್ತಿದ್ದೇನೆ ಎಂಬ ಮಾಹಿತಿ ತಿಳಿದು ಬಂತು. ಆಗ “ತಕ್ಷಣ, ನಾನು ಪೊಲೀಸರನ್ನು ಕರೆದಿದ್ದೇನೆ” ಎಂದು ರವಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಗುಪ್ತಾನನ್ನು ಸೆಕ್ಟರ್ 11 ಜಂಕ್ಷನ್ ಬಳಿ ಟವೆಲ್ ಸುತ್ತಿ ಮಗಳ ಮೃತ ದೇಹದೊಂದಿಗೆ ಬಂಧಿಸಲಾಗಿದೆ.

ಅವರ ಮಗಳ ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವರದಿಯನ್ನು ಈಗ ಕಾಯಲಾಗುತ್ತಿದೆ. ಪೊಲೀಸರು ಮಗುವಿನ ತಾಯಿಯನ್ನು ಸಹ ಹುಡುಕುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights