ಪೌರತ್ವ ವಿರೋಧಿಸಿ ನಡೆಯುವ ರ್ಯಾಲಿಗಳು ಕಾಂಗ್ರೇಸ್ ಕೃಪಾ ಪೋಷಿತ – ಎಂ.ಪಿ ರೇಣುಕಾಚಾರ್ಯ
ಪೌರತ್ವ ಚರ್ಚೆಯಾಗುತ್ತಿದೆ, ದೇಶ ದ್ರೋಹಿಗಳು ಪೌರತ್ವ ವಿರೋದಿಸುತ್ತಿದ್ದಾರೆ. ಓಟ್ ಬ್ಯಾಂಕ್ ಗಾಗೀ ರಾಜಕಾರಣಿಗಳು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ವಿರೋಧಿಸಿ ನಡೆಯುವ ರ್ಯಾಲಿಗಳು ಕಾಂಗ್ರೇಸ್ ಕೃಪಾ ಪೋಷಿತ ಎಂದು ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಕಾಂಗ್ರೇಸ್ ನವರಿಗೆ ಓಟ್ ಬೇಕು, ಓಟ್ ಗಾಗೀ ಭಾರತ ಮಾರಾಟ ಮಾಡಲು ಸಿದ್ದ. ಭಾರತ ಕಾಂಗ್ರೇಸ್ ನವರಿಗೆ ಮಾವನ ಮನೆಯಾ….? ಗೋಲಿ ಬಾರ್ ನಲ್ಲಿ ಮೃತರಿಗೆ ಪರಿಹಾರ ಕೊಡಿ ಎಂದು ಹೇಳ್ತಾರೆ. ಪರಿಹಾರ ಅವರ ಅಪ್ಪನ ಮನೆ ಆಸ್ತೀನಾ. ಗಲಭೆಗೆ ಯು ಟಿ ಖಾದರ್ ಕಾರಣ. ಕಾಂಗ್ರೇಸ್ ನವರಿಗೆ ತಾಖತ್ ಇದ್ದರೆ ಪಾಕಿಸ್ತಾನಕ್ಕೆ ಹೋಗಿ ಹಿಂದೂ ಪರ ಹೋರಾಟ ಮಾಡಿ.
ನಾನು ಬೇಡಾ ಅಂದ್ರೂ ಖೇಸ್ ನನ್ನನ್ನ ಹುಡುಕಿಕೊಂಡು ಬರುತ್ತೇ. ಇನ್ನು ಹೊನ್ನಾಳಿಗೆ ೧೫ ಬಸ್ ಬರುತ್ತೇ ನಾನೇ ಓಡಿಸ್ತೀನಿ. ಯಾರು ನನ್ನನ್ನ ತಡಿತಾರೆ, ಯಾರನ್ನ ಸಸ್ಪೆಂಡ್ ಮಾಡ್ತಾರೆ ನಾನೂ ನೋಡ್ತೀನಿ. ಡಿಸಿ ನೋಟಿಸ್ ಕೊಟ್ಟಿದ್ದಾರೆ, ಇದು ಸರಿಯಲ್ಲಾ ಎಂದು ವಾರ್ನಿಂಗ್ ನೀಡಿದ್ದಾರೆ.
ನನ್ನ ಬಳಿ ಹೆವಿ ಡ್ರೈವಿಂಗ್ ಲೈಸೆನ್ಸ್ ಇಲ್ಲಾ, ನನ್ನ ಬಳಿ ಆತ್ಮವಿಶ್ವಾಸ ಇದೇ.ಕಾನೂನು ಅಡಿ ನಾನು ಮಾಡಿದ್ದು ತಪ್ಪು. ಕಾನೂನನ್ನ ಗೌರವಿಸುತ್ತೆನೆ, ಆದ್ರೆ ನನಗೆ ಡ್ರೈವಿಂಗ್ ಮೇಲೆ ಆತ್ಮ ವಿಶ್ವಾಸವಿದೆ. ಚಾಲನೆ ಮಾಡುವಾಗ ಏನಾದ್ರೂ ಆದ್ರೆ ನಾನೇ ಹೋಣೆಯಲ್ಲವಾ. ಮುಂದೆ ಅವಕಾಶ ಸಿಕ್ಕರೆ ಹೆಲಿಕಾಪ್ಟರ್ ವಿಮಾನ ಟ್ರೈನ್ ಕೂಡ ಹೋಡಿಸುತ್ತೆನೆ.
ದಾವಣಗೆರೆ ಜಿಲ್ಲೆಗೆ ಯಾರನ್ನಾದರೂ ಮಂತ್ರಿ ಮಾಡಲಿ. ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ನಾನಗೂ ಡಿಸಿಎಂ ಸ್ಥಾನ ಕೊಡಿ ಎಂದು ಕೇಳ್ತೀನಿ ಎಂದರು.