ಪ್ರವಾಹ ಹಿನ್ನೆಲೆ : ಬೈಕ್ನ್ನು ತಲೆ ಮೇಲೆ ಹೊತ್ತುಕೊಂಡು ನೀರು ದಾಟಿದ ಭೂಪ…
ಪ್ರವಾಹದಿಂದಾಗಿ ಗ್ರಾಮದ ಸುತ್ತ ನೀರು ಆವರಿಸಿದ್ದು ಅಕ್ಷರಶ: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಈ ನಡುವೆ ಬೈಕ್ನ್ನು ತಲೆ ಮೇಲೆ ಹೊತ್ತುಕೊಂಡು ನೀರು ದಾಟಿದ್ದಾನೆ ಭೂಪನೊಬ್ಬ. ಮಹಾರಾಷ್ಟ್ರದ ಉಜನಿ ಜಲಾಷಯದಿಂದ ಭೀಮಾ ನದಿಗೆ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.
ಈ ಹಿನ್ನೆಲೆ ತಾರಾಪುರ ಗ್ರಾಮವನ್ನು ಸುತ್ತುವರೆದ ನೀರು ತುಂಬಿಕೊಂಡಿದ್ದು, ಮನೆಗಳಿಗೆಲ್ಲಾ ನೀರು ಹೊಕ್ಕಿದೆ.
ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆಯಲ್ಲಿ ಬೈಕ್ ಚಲಾಯಿಸಲು ಕಷ್ಟ ಎಂಬುದನ್ನು ಅರಿತ ಯುವಕ, ಹೆಗಲ ಮೇಲೆ ಬೈಕ್ ಹೊತ್ತು ನೀರು ದಾಟಿದ ಯುವಕನ ವಿಡಿಯೋ ವೈರಲ್ ಆಗಿದೆ.