ಪ್ರವಾಹ ಹಿನ್ನೆಲೆ : ಬೈಕ್‌ನ್ನು ತಲೆ ಮೇಲೆ ಹೊತ್ತುಕೊಂಡು ನೀರು ದಾಟಿದ ಭೂಪ…

ಪ್ರವಾಹದಿಂದಾಗಿ ಗ್ರಾಮದ ಸುತ್ತ ನೀರು ಆವರಿಸಿದ್ದು ಅಕ್ಷರಶ: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಈ ನಡುವೆ ಬೈಕ್‌ನ್ನು ತಲೆ ಮೇಲೆ ಹೊತ್ತುಕೊಂಡು ನೀರು ದಾಟಿದ್ದಾನೆ ಭೂಪನೊಬ್ಬ. ಮಹಾರಾಷ್ಟ್ರದ ಉಜನಿ ಜಲಾಷಯದಿಂದ ಭೀಮಾ ನದಿಗೆ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.

ಈ ಹಿನ್ನೆಲೆ ತಾರಾಪುರ ಗ್ರಾಮವನ್ನು ಸುತ್ತುವರೆದ ನೀರು ತುಂಬಿಕೊಂಡಿದ್ದು, ಮನೆಗಳಿಗೆಲ್ಲಾ ನೀರು ಹೊಕ್ಕಿದೆ.

ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆಯಲ್ಲಿ ಬೈಕ್‌ ಚಲಾಯಿಸಲು ಕಷ್ಟ ಎಂಬುದನ್ನು ಅರಿತ ಯುವಕ, ಹೆಗಲ ಮೇಲೆ ಬೈಕ್ ಹೊತ್ತು ನೀರು ದಾಟಿದ ಯುವಕನ ವಿಡಿಯೋ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights