ಫೋನಾಯಣ : ಗೌಡ್ರು ಫೋನ್ ಮಾಡಿಲ್ಲ, ಯಾರು ಯಾರಿಗೆ ಫೋನ್ ಮಾಡಿದ್ರು ಎಂಬುದೇ ಜಿಜ್ಞಾಸೆ
ಮಾಜಿ ಪಿಎಂ ದೇವೇಗೌಡ್ರು ಹಾಗೂ ಸಿಎಂ ಯಡಿಯೂರಪ್ಪ ನಡುವೆ ಈಗ ಫೋನ್ ವಾರ್ ಆರಂಭವಾಗಿದೆ. ಗೌಡರು ಸಿಎಂಗೆ ಫೋನ್ ಮಾಡಿ ಮಾತುಕತೆ ನಡೆಸಿದ್ದರು ಎಂಬ ಅಂಶ ಬಯಲಾಗಿ ಸಾಕಷ್ಟು ರಾಜಕೀಯ ಕಾವು ಪಡೆದಿತ್ತು.
ಬುಧವಾರ ಈ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ ತಮಗೆ ದೇವೇಗೌಡರು ಯಾವುದೇ ಕರೆ ಮಾಡಿಲ್ಲ ಎಂದು ಹೇಳಿದರು. ಆದರೆ ಯಡಿಯೂರಪ್ಪನವರಿಗೆ ನಾನೇ ಕಾಲ್ ಮಾಡಿದ್ದೆ ಎಂದು ಖುದ್ದು ದೇವೇಗೌಡರೇ ಹೇಳಿಕೆ ನೀಡಿರುವುದು ಸೋಜಿಗದ ಸ್ಥಿತಿ ನಿರ್ಮಿಸಿದೆ.
ದೇವೇಗೌಡ್ರು ನನಗೆ ಫೋನ್ ಮಾಡಿದ್ರು ಅನ್ನೋ ವಿಷಯದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಮಾಜಿ ಪ್ರಧಾನಿಯಾಗಿ ಗೌಡರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋ ಶಕ್ತಿ ಇದೆ. ನಾನು ದೇವೇಗೌಡರ ಹೆಸರನ್ನು ಯಾವುದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಬಿಎಸ್ವೈ ಹೇಳಿದ್ದಾರೆ.
ಆದರೆ ಈ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿರುವ ಮಾಜಿ ಪಿಎಂ ದೇವೇಗೌಡರು ತಾವು ದೂರವಾಣಿ ಮೂಲಕ ಬಿಎಸ್ವೈ ಜೊತೆ ಮಾತನಾಡಿದ್ದನ್ನು ದೃಢಪಡಿಸಿದ್ದಾರೆ. ಯಾವುದೋ ಕಡತಕ್ಕೆ ಸಹಿ ಹಾಕುವ ಸಂಬಮಧ ಸಿಎಂ ಜೊತೆ ಮಾತನಾಡಿದ್ದು ನಿಜ ಎಂದು ಗೌಡರು ಸಮಜಾಯಿಷಿ ನೀಡಿದ್ದಾರೆ.
ಆದರೆ ಕೇವಲ ಕಟತವೊಮದಕ್ಕೆ ಸಹಿ ಮಾಡುವಂತೆ ಮನವಿ ಮಾಡಲು ದೇವೇಗೌಡರು ಸಿಎಂಗೆ ಕರೆ ಮಾಡಿದ್ದಾರೆ ಎಂಬ ಮಾತನ್ನು ರಾಜಕೀಯ ವಿಶ್ಲೇಷಕರು ಒಪ್ಪಲು ತಯಾರಿಲ್ಲ. ಒಟ್ಟಿನಲ್ಲಿ ಯಾರು ಯಾರಿಗೆ ಕರೆ ಮಾಡಿದ್ದರು ಎಂಬ ಜಿಜ್ಞಾಸೆ ಮಾತ್ರ ಮುಂದುವರಿದಿದೆ.