ಬೈ ಎಲೆಕ್ಷನ್ ಫಲಿತಾಂಶಕ್ಕೆ ದಿನಗಣನೆ : ಅಭ್ಯರ್ಥಿಗಳಿಂದ ಟೆಂಪಲ್ ರನ್
ಹುಣಸೂರು ಬೈ ಎಲೆಕ್ಷನ್ ಫಲಿತಾಂಶಕ್ಕೆ ದಿನಗಣನೆ ಆರಂಭಗೊಂಡಿದ್ದು ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡಿದ್ದಾರೆ.
ಮಹಾರಾಷ್ಟ್ರದ ಶಿರಡಿಯಲ್ಲಿ ವಿಶ್ವನಾಥ್ ವಿಶೇಷ ಪೂಜೆ ಮಾಡಿದ್ದಾರೆ. ಗೆಲುವಿಗಾಗಿ ಸಾಯಿಬಾಬಾನ ಮೊರೆಹೋದ ಹಳ್ಳಿಹಕ್ಕಿ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ವಿಶ್ವನಾಥ್ ಶಿರಡಿಯ ಸಾಯಿಬಾಬಾನ ದರ್ಶನ ಪಡೆದು ಮಂತ್ರಾಲಯಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.
ಮತ್ತೊಂದ ಕಡೆ ಕೈ ಅಭ್ಯರ್ಥಿ ಗೆಲುವಿಗಾಗಿ ಮಂಜುನಾಥೇಶ್ವರನ ಮೊರೆ ಹೋಗಿದ್ದಾರೆ.
ಇನ್ನಿ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ರಿಂದಲೂ ಟೆಂಪಲ್ ರನ್ ಶುರುವಾಗಿದೆ. ದೇವರಹಳ್ಳಿ ಸೋಮಶೇಖರ್ ತುರುವೇಕೆರೆಯ ಮನೆ ದೇವರು ಲಕ್ಷ್ಮಿದೇವಿ ಮೊರೆ ಹೋಗಿದ್ದಾರೆ.