ಭೀಕರ ಅಪಘಾತ : ಮತದಾನಕ್ಕೆಂದು ಬಂದಿದ್ದ ಯುವಕ : ರಸ್ತೆ ಮೇಲೆ ಹೆಣವಾದ…!
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಿಂದಾಗಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ನಾಗಮಂಗಲ ತಾಲೂಕಿನ ಬೋಗಾದಿ ಬಳಿಯ ಕೆ.ಆರ್.ಪೇಟೆ- ನಾಗಮಂಗಲ ರಸ್ತೆಯಲ್ಲಿ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದ ನರಸಿಂಹರಾಜು(೩೧) ಮೃತ ದುರ್ದೈವಿ ಯುವಕ. ಬೆಂಗಳೂರಿನಲ್ಲಿ ಮೃತ ನರಸಿಂಹಸ್ವಾಮಿ ಮತ್ತು ದೊರೆಸ್ವಾಮಿ ಕೆಲಸ ಮಾಡ್ತಿದ್ದರು. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಮತ ಚಲಾಯಿಸಲು ಇಬ್ಬರು ಬೈಕಿನಲ್ಲಿ ಊರಿಗೆ ಬಂದಿದ್ರು. ಮತದಾನ ಮುಗಿಸಿ ವಾಪಸ್ಸು ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಪರಿಣಾಮ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ನರಸಿಂಹರಾಜು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಾವನ್ನಪ್ಪಿದ್ದ ಎನ್ನಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.